Bengaluru

ರಾಜಕಾರಣಕ್ಕಾಗಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡ್ತಿದಾರೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್‌ನವರು ನಾಳೆ ಮೇಕೆದಾಟು ಪಾದಯಾತ್ರೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್‌ ಬೊಮ್ಮಾಐಇಯವರು ಪ್ರತಿಕ್ರಿಯೆ ನೀಡಿದ್ರು. ಕಾಂಗ್ರೆಸ್ ಯಾಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಜಗತ್ತಿಗೆ ಗೊತ್ತಾಗಿದೆ.ಪಾದಯಾತ್ರೆ -1 ಮತ್ತು 2 ಎಂದು ಮಾಡುತ್ತಿದ್ದಾರೆ. ರಾಜಕಾರಣವೇ ಅವರಿಗೆ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ರು.

ಅಧಿವೇಶವನ್ನೂ ರಾಜಕಾರಣಕ್ಕಾಗಿಯೇ ಹಾಳು ಮಾಡಿದರು. ಮುಂದೆ ಹೊರಗೆ ಸಹ ಅದನ್ನೇ ಮುಂದುವರೆಸುತ್ತಿದ್ದಾರೆ ಎಂದರು. ಬೆಂಗಳೂರು ನಗರದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ಮಾಡುವುದರಿಂದ ನಿಷೇಧಾಜ್ಞೆ ಮಾಡುವ ಸಾಧ್ಯತೆಗಳ ಬಗ್ಗೆ ಮಾತನಾಡಿದ್ದು, ನಗರದಲ್ಲಿ ಕನಿಷ್ಠ ಕೋವಿಡ್ ನಿಯಮಗಳು ಇದ್ದು, ಎಲ್ಲರೂ ಅದನ್ನು ಪಾಲಿಸಬೇಕು ಎಂದು ಬೊಮ್ಮಾಯಿಯವರು ತಿಳಿಸಿದ್ರು.

Share Post