BengaluruCrime

ನಿಂತಿದ್ದ ಟ್ಯಾಂಕರ್‌ಗೆ ಬೈಕ್‌ ಡಿಕ್ಕಿ; ಸವಾರರಿಬ್ಬರೂ ಸಾವು

ಬೆಂಗಳೂರು; ದೇವನಹಳ್ಳಿ ಬಳಿ ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಟ್ಯಾಂಕರ್‌ಗೆ ಬೈಕ್‌ ಡಿಕ್ಕಿ ಹೊಡೆದಿದ್ದು, ಬೈಕ್‌ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ಯುವಕ ಹಾಗೂ ಯುವತಿ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರದ ಕಡೆ ಪ್ರಯಾಣ ಮಾಡುತ್ತಿದ್ದರು. ಬೈಕ್‌ ಸವಾರ ಅತಿವೇಗವಾಗಿ ಬೈಕ್‌ ಚಲಾವಣೆ ಮಾಡುತ್ತಿದ್ದ. ಅದೇ ಕಾರಣಕ್ಕಾಗಿ ಸೈಡ್‌ನಲ್ಲಿ ನಿಂತಿದ್ದ ಟ್ಯಾಂಕರ್‌ನ್ನು ಆತ ಗಮನಿಸಿಲ್ಲ. ಹೀಗಾಗಿ ನೇರವಾಗಿ ಆತ ಟ್ಯಾಂಕರ್‌ಗೆ ಬೈಕ್‌ನ್ನು ಗುದ್ದಿದ್ದಾನೆ. ಬೈಕ್‌ನಲ್ಲಿದ್ದ ಇಬ್ಬರಿಗೂ ತೀವ್ರವಾಗಿ ರಕ್ತಸ್ರಾವವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

 

Share Post