BengaluruEconomyTechTechnology

ಇಂದಿನಿಂದ ಹೂಡಿಕೆದಾರರ ಸಮಾವೇಶ; ಹೂಡಿಕೆದಾರರಿಗೆ ರೆಡ್‌ಕಾರ್ಪೆಟ್‌ – ಮೋದಿ

ಬೆಂಗಳೂರು; ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ. ಪ್ರಧಾನಿ ಮೋದಿಯವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಇನ್ವೆಸ್ಟ್‌ ಕರ್ನಾಟಕ-೨೦೨೨ಗೆ ಚಾಲನೆ ನೀಡಿದರು. ಅನಂತರ ಮಾತನಾಡಿದ ಅವರು, ಹೂಡಿಕೆದಾರರಿಗೆ ರೆಡ್‌ ಕಾರ್ಪೆಟ್‌ ಹಾಸಿ ಸ್ವಾಗತಿಸುತ್ತಿದ್ದೇವೆ. ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.

ಪ್ರಪಂಚದ ಮೂಲೆ ಮೂಲೆಗಳಿಂದ ಬಂದಿರುವ ಹೂಡಿಕೆದಾರರೇ ‘ವೆಲ್​​ಕಂ ಟು ಇಂಡಿಯಾ, ವೆಲ್​ಕಂ ಟು ನಮ್ಮ ಕರ್ನಾಟಕ, ವೆಲ್​ಕಂ ಟು ನಮ್ಮ ಬೆಂಗಳೂರು ಎಂದು ಪ್ರಧಾನಿ ಭಾಷಣ ಶುರು ಮಾಡಿದರು. ನಿನ್ನೆ ಇನ್ನೂ ಕರ್ನಾಟಕದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡಿಗರಿಗೆಲ್ಲರಿಗೂ ನನ್ನ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Share Post