BengaluruCrime

ಮತ್ತೊಂದು ಆಸಿಡ್‌ ಅಟ್ಯಾಕ್‌; ಸ್ನೇಹಿತ ತಂದ ಆಪತ್ತು..!

ಬೆಂಗಳೂರು; ಇತ್ತೀಚೆಗೆ ನಾಗೇಶ್‌ ಎಂಬ ಪಾಗಲ್‌ ಪ್ರೇಮಿ ಯುವತಿ ಮೇಲೆ ಆಸಿಡ್‌ ಹಾಕಿದ್ದ. ಈ ಸುದ್ದಿ ಮಾಸುವ ಮುನ್ನವೇ ಕಬ್ಬನ್‌ ಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಸ್ನೇಹಿತನಿಗೇ ವ್ಯಕ್ತಿಯೊಬ್ಬ ಆಸಿಡ್‌ ಎರಚಿದ್ದಾನೆ. 

 

ಕಬ್ಬನ್‌ ಪೇಟೆಯ ಹತ್ತನೇ ಕ್ರಾಸ್‌ನಲ್ಲಿ ಈ ಕೃತ್ಯ ಎಸಗಲಾಗಿದೆ. ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ಎಂಬಾತನೇ ಆಸಿಡ್‌ ಎರಚಿದ ಆರೋಪಿ. ಆರೋಪಿ ಜನತಾ ಅದಕ್ ಹಾಗೂ ದಾಳಿಗೊಳಗಾದಾತ ಇಬ್ಬರೂ ಬೆಳ್ಳಿ ಪಾಲಿಶ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಸಂತ್ರಸ್ತ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಲು ಹೋಗಿದ್ದಾನೆ. ಇದ್ರಿಂದ ಕೆರಳಿದ ಆರೋಪಿ ನಜತಾ ಅದಕ್‌, ಬೆಳ್ಳಿ ಪಾಲಿಶ್‌ ಮಾಡಲು ಬಳಸುವ ಡೈಲ್ಯೂಟ್‌ ಆಸಿಡ್‌ರನ್ನು ಎರಚಿದ್ದಾರೆ.

 

ಘಟನೆಯಲ್ಲಿ ಸಂತ್ರಸ್ತನ ಮುಖ, ಎದೆ ಗಾಯವಾಗಿದ್ದು, ದೇಹದ ಶೇ.30ರಷ್ಟು ಸುಟ್ಟಿದೆ. ಸಂತ್ರಸ್ತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಜನತಾ ಅದಕ್‍ನನ್ನು ಮೈಸೂರು ಬಳಿ ಪೊಲೀಸರು ಬಂಧಿಸಿದ್ದಾರೆ.

 

Share Post