BengaluruCrime

ಇಬ್ಬರು ಪ್ರೇಯಸಿಯರ ನಡುವೆ ನಲುಗಿದ ಯುವಕ; ಕಾಟ ತಾಳದೇ ಆತ್ಮಹತ್ಯೆ

ಬೆಂಗಳೂರು; ಆತ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನೋಡೋದಕ್ಕೂ ಚೆನ್ನಾಗಿದ್ದ. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಜೊತೆ ಲವ್ವಲ್ಲಿ ಬಿದ್ದಿದ್ದ. ಇದೇ ವೇಳೆ ಅದೇ ಕಂಪನಿಯ ಮತ್ತೊಂದು ಹುಡುಗಿ ಜೊತೆಯೂ ಆತ ಲವ್ವಿ ಡವ್ವಿ ಶುರು ಮಾಡಿದ್ದ. ಈ ತ್ರಿಕೋನ ಪ್ರೇಮ ಕಥೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ನಡೆದಿರೋದು ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ. ಸಂತೋಷ್‌ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾರೆ. ಸಂತೋಷ್‌ ಮೊದಲಿಗೆ ತಮ್ಮದೇ ಕಂಪನಿಯಲ್ಲಿ ಕೆಲಸ ಮಾಡುವ ಯುವತಿಯ ಜೊತೆ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದ. ಆದ್ರೆ ಕೆಲ ತಿಂಗಳ ಹಿಂದೆ ಇಬ್ಬರ ನಡುವೆ ಮನಸ್ತಾಪ ಆಗಿ ಬ್ರೇಕಪ್‌ ಆಗಿತ್ತು. ಇದಾದ ಮೇಲೆ ಸಂತೋಷ್‌ಗೆ ಅದೇ ಕಂಪನಿಯ ಮತ್ತೊಂದು ಯುವತಿ ಜೊತೆ ಲವ್‌ ಆಗಿದೆ. ಇಬ್ಬರೂ ಸುತ್ತಾಡೋದನ್ನು ನೋಡಿ ಹಳೇ ಹುಡುಗಿ ಇತ್ತೀಚೆಗೆ ಸಂತೋಷ್‌ಗೆ ಕಪಾಳಮೋಕ್ಷ ಮಾಡಿದ್ದಳು.

ಅನಂತರ ಮೊದಲ ಹುಡುಗಿ ತನ್ನ ಜೊತೆಯಲ್ಲಿದ್ದ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡ್ತೀನಿ ಅಂತ ಬೆದರಿಕೆ ಕೂಡಾ ಹಾಕಿದ್ದಳು. ಇದರಿಂದಾಗಿ ಸಂತೋಷ್‌, ಹಳೇ ಲವರ್‌ಳನ್ನೇ ಮದುವೆಯಾಗಲು ನಿರ್ಧರಿಸಿದ್ದ. ಎರಡೂ ಕುಟುಂಬಗಳು ಕೂತು ಮಾತುಕತೆ ನಡೆಸಿ, ಮದುವೆಗೆ ಒಪ್ಪಿಗೆ ಕೂಡಾ ಕೊಟ್ಟಿದ್ದರು. ಈ ನಡುವೆ ಹಳೇ ಹುಡುಗಿಯನ್ನು ಕಂಪನಿಯವರು ಬೇರೆಡೆಗೆ ಟ್ರಾನ್ಸ್‌ಫರ್‌ ಮಾಡಿದ್ದರು. ಹೊಸ ಲವರ್‌ಗಾಗಿ ನನ್ನನ್ನು ಟ್ರಾನ್ಸ್‌ಫರ್‌ ಮಾಡಿಸಿದ್ದೀಯ ಅಂತ ಹಳೇ ಲವರ್‌ ಕ್ಯಾತೆ ತೆಗೆದಿದ್ದಾಳೆ.

ಇದರಿಂದ ಬೇಸತ್ತ ಯುವಕ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಂತೋಷ್‌ ಪೋಷಕರು ಇಬ್ಬರೂ ಯುವತಿಯರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಮೊದಲ ಲವರ್ A1, ಎರಡನೇ ಲವರ್ A2 ಆಗಿದ್ದಾರೆ.

Share Post