BengaluruPolitics

ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಿಸುತ್ತೇವೆ; ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು; ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಣೆ ಮಾಡುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ನಾವು ಈ ಹಿಂದೆ ವಿಮಾನ ನಿಲ್ದಾಣಗಳ ನಿರ್ವಹಣೆಯ ಹೊಣೆಯನ್ನು ಏರ್‌ಪೋರ್ಟ್‌ ಆಥಾರಿಟಿಗೆ ನೀಡುತ್ತಿದ್ದೆವು. ಆದ್ರೆ ಇನ್ನು ಮುಂದೆ ನಾವೇ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಿರ್ವಹಣೆ ಏರ್‌ಪೋರ್ಟ್‌ ಆಥಾರಿಟಿಗೆ ನೀಡಿದಾಗ ವಿಮಾನ ನಿಲ್ದಾಣದ ಭೂಮಿ ಕೂಡಾ ಅವರಿಗೇ ಟ್ರಾನ್ಸ್‌ಫರ್‌ ಆಗುತ್ತಿತ್ತು. ಇದರ ಜೊತೆಗೆ ವಿಮಾನ ನಿಲ್ದಾಣಗಳ ಮೇಲೆ ನಮ್ಮ ಹಿಡಿತ ಕೂಡಾ ಇರುತ್ತಿರಲಿಲ್ಲ. ಹೀಗಾಗಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ವಹಣೆ ಮಾಡುತ್ತಿದೆ. ನಾವೇ ಏರ್‌ಲೈನ್ಸ್‌ ಕೂಡಾ ಮಾಡುತ್ತೇವೆ. ಆ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

 

Share Post