BengaluruCrime

ಕೋರ್ಟ್‌ ಆವರಣದಲ್ಲಿ ನಿಲ್ಲಿಸಿದ್ದ ಹಿಟಾಚಿ ಕಳವು!; ಇದು ಖತರ್ನಾಕ್‌ ಕಳ್ಳತನ

ಬೆಂಗಳೂರು; ಕೋರ್ಟ್‌ ಆವರಣದಲ್ಲಿ ನಿಲ್ಲಿಸಿದ್ದ ಹಿಟಾಚಿ ವಾಹನವೇ ನಾಪತ್ತೆಯಾಗಿದೆ.. ಯಾರೋ ದುಷ್ಕರ್ಮಿಗಳು ಹಿಟಾಚಿ ವಾಹನವನ್ನು ಕಳವು ಮಾಡಿದ್ದಾರೆ.. ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಈ ಘಟನೆ ನಡೆದಿದ್ದು, ಹಲಸೂರ್‌ ಗೇಟ್‌ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ..

ಇದನ್ನೂ ಓದಿ; ವಿಧಾನಸೌಧದ ಗುಮ್ಮಟದಲ್ಲಿ ಕಾಣಿಸಿಕೊಂಡ ಬಿರುಕು!; ಸ್ಪೀಕರ್‌ರಿಂದ ಪರಿಶೀಲನೆ!

ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಕಾಮಗಾರಿ ನಡೆಯುತ್ತಿತ್ತು.. ಈ ಹಿನ್ನೆಲೆಯಲ್ಲಿ ಕೋರ್ಟ್‌ ಆವರಣದಲ್ಲೇ ಹಿಟಾಚಿ ನಿಲ್ಲಿಸಲಾಗುತ್ತಿತ್ತು… ಆದ್ರೆ ಜುಲೈ 17ರಂದು ಮಧ್ಯರಾತ್ರಿ ಲಾರಿಯೊಂದಿಗೆ ಬಂದ ನಾಲ್ವರು ವ್ಯಕ್ತಿಗಳು ಸೆಕ್ಯೂರಿಟಿ ಗಾರ್ಡ್‌ ಬಳಿ, ಹಿಟಾಚಿ ನಮ್ಮದೇ.. ಕೆಲಸ ಮುಗಿದಿರುವುದರಿಂದ ತೆಗೆದುಕೊಂದು ಹೋಗುತ್ತೇವೆ ಎಂದು ಹೇಳಿದ್ದಾರೆ.. ಇದನ್ನು ನಂಬಿದ ಸೆಕ್ಯೂರಿಟಿ ಗಾರ್ಡ್‌ ಓಕೆ ಎಂದಿದ್ದಾರೆ..

ಇದನ್ನೂ ಓದಿ; ಪ್ರತಿ ತಿಂಗಳೂ 10 ಸಾವಿರ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಿ!

ಇತ್ತ ಕಳ್ಳರು ಆರಾಮಾಗಿ ಹಿಟಾಚಿಯನ್ನು ಲಾರಿಗೆ ಹಾಕಿಕೊಂಡು ಎಸ್ಕೇಪ್‌ ಆಗಿದ್ದಾರೆ.. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.. ಇದರ ಆಧಾರದ ಮೇಲೆ ಪೊಲೀಸರು ಈಗ ಬೆಂಗಳೂರಿನ ಜಿಗಣಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.. ಉಳಿದ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

Share Post