BengaluruCrime

ಕರ್ನಾಟಕ ಹೈಕೋರ್ಟ್‌ 6 ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ; ಪಾಕ್‌ ಕೈವಾಡ ಶಂಕೆ

ಬೆಂಗಳೂರು; ರಾಜ್ಯ ಹೈಕೋರ್ಟ್‌ನ ಆರು ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಬಂದಿದೆ. ದುಬೈ ಗ್ಯಾಂಗ್‌ನಿಂದ ಕೊಲೆ ಮಾಡಿಸುವುದಾಗಿ ಸಂದೇಶ ಕಳುಹಿಸಲಾಗಿದ್ದು, ಈ ಬಗ್ಗೆ ಸೆಂಟ್ರಲ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದುಷ್ಕರ್ಮಿಗಳು ಹಣಕ್ಕಾಗಿ ಬೇಡಿ ಇಟ್ಟಿದ್ದಾರೆ. 50 ಲಕ್ಷ ರೂಪಾಯಿಯನ್ನು ಬ್ಯಾಂಕ್‌ ಖಾತೆಗೆ ಜಮೆ ಮಾಡಬೇಕು ಎಂದು ಬ್ಯಾಂಕ್‌ ಖಾತೆಯೊಂದನ್ನು ನೀಡಿದ್ದಾರೆ. ಅದು ಪಾಕಿಸ್ತಾನ ಮೂಲದ ಬ್ಯಾಂಕ್‌ ಖಾತೆ ಎಂದು ತಿಳಿದುಬಂದಿದ್ದು, ಅಲೈಡ್‌  ಬ್ಯಾಂಕ್‌ನ ಖಾತೆ ಎಂದು ಗೊತ್ತಾಗಿದೆ. ಹೀಗಾಗಿ ಪಾಕಿಸ್ತಾನದಿಂದ ಈ ಬೆದರಿಕೆ ಬಂದಿರಬಹುದು. ಇದರಲ್ಲಿ ಉಗ್ರರ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಹೈಕೋರ್ಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಕೆ.ಮುರಳೀಧರ್‌ ಅವರಿಗೆ ಈ ಸಂದೇಶ ಬಂದಿದೆ. ವಾಟ್ಸಾಪ್‌ ಮೂಲಕ ಸಂದೇಶ ರವಾನಿಸಲಾಗಿದೆ. ಅದರ ಆಧಾರದ ಮೇಲೆ ಪೊಲೀಸರು ಕೇಸ್‌ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

 

Share Post