BengaluruPolitics

ಸತೀಶ್‌ ನಿವಾಸದಲ್ಲಿ ದಲಿತ ಸಚಿವರ ರಹಸ್ಯ ಸಭೆ; ಏನಿದರ ಗುಟ್ಟು..?

ಬೆಂಗಳೂರು; ಮೂವರು ಡಿಸಿಎಂಗಳು ಮಾಡಿದರೆ ಯಾರಿಗೇನು ನಷ್ಟ ಆಗುತ್ತೆ ಎಂದು ಸಚಿವ ಕೆ.ಎನ್‌.ರಾಜಣ್ಣ ನಿನ್ನೆ ಪ್ರಶ್ನೆ ಮಾಡಿದ್ದರು. ಈ ನಡುವೆಯೇ ನಿನ್ನೆ ದಲಿತ ಸಚಿವರ ರಸಹ್ಯ ಸಭೆ ನಡೆದಿದೆ. ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಈಗಾಗಲೇ ಹೈಕಮಾಂಡ್‌ ಭೇಟಿ ಮೂವರು ಡಿಸಿಎಂಗಳಿಗೆ ಭೇಡಿಕೆ ಇಟ್ಟಿದ್ದೂ ಆಗಿದೆ. ಈ ನಡುವೆಯೇ ನಿನ್ನೆ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ರಹಸ್ಯ ಮೀಟಿಂಗ್‌ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗೃಹ ಸಚಿವ ಪರಮೇಶ್ವರ್, ಸಚಿವರಾದ ಹೆಚ್.ಸಿ ಮಹಾದೇವಪ್ಪ ಹಾಗೂ ಕೆ.ಎನ್​ ರಾಜಣ್ಣ ಅವರು ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಮೀಟಿಂಗ್‌ ನಡೆಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಈ ಚರ್ಚೆ ನಡೆದಿದೆ. ಲೋಕಸಭಾ ಚುನಾವಣೆಗೂ ಮುಂಚೆ ಮೂವರು ಡಿಸಿಎಂಗಳ ನೇಮಕ ಮಾಡಿದರೆ, ಹೆಚ್ಚಿನ ಮತಗಳನ್ನು ಪಡೆಯೋದಕ್ಕೆ ಸಾಧ್ಯವಾಗುತ್ತೆ ಅನ್ನೋದು ಇವರ ಮಾತು.

ಮೀಟಿಂಗ್​​ ಮುಗಿಸಿ ಹೊರ ಬಂದ ನಾಯಕರು ಊಟಕ್ಕೆ ಕರೆದಿದ್ರು ಬಂದಿದ್ದೆವು ಅಷ್ಟೇ ಎಂದು ಹೇಳಿದ್ದಾರೆ. ಇನ್ನು ಕೆಲ ದಿನಗಳ ಹಿಂದೆ ಇದೇ ರೀತಿ ಜಿ.ಪರಮೇಶ್ವರ್‌ ನಿವಾಸದಕ್ಕೆ ದಲಿತ ಸಚಿವರು ಸೇರಿದ್ದರು. ಇದೀಗ ಮತ್ತೆ ಮೀಟಿಂಗ್‌ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

 

Share Post