Astrology

ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!

ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರು ನಮ್ಮಲ್ಲಿ ಕೋಟ್ಯಂತರ ಜನ ಇದ್ದಾರೆ.. ಪ್ರತಿದಿನವೂ ಅವರು ಜ್ಯೋತಿಷ್ಯ, ಕಾಲ, ಸಮಯ ನೋಡಿಯೇ ತಾವು ಮಾಡುವ ಕೆಲಸ ಶುರು ಮಾಡುತ್ತಾರೆ.. ಹೀಗಾಗಿಯೇ ಜ್ಯೋತಿಷ್ಯಕ್ಕೆ ವಿಶೇಷ ಮಹತ್ವವಿದೆ.. ಅಂದಹಾಗೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹಾಶಕ್ತಿ ಯೋಗಕ್ಕೆ ವಿಶೇಷ ಶಕ್ತಿ ಹಾಗೂ ಮಹತ್ವವಿದೆ.. ದುಷ್ಟ ಗ್ರಹಗಳಾದ ಶನಿ, ಕುಜ, ರವಿ, ರಾಹು ಹಾಗೂ ಕೇತುಗಳು 12ನೇ ಸ್ಥಾನದಲ್ಲಿ ಸಂಚಾರ ಮಾಡುವಾಗ ಈ ಮಹಾಶಕ್ತಿ ಯೋಗ ಏರ್ಪಡುತ್ತದೆ.. ಈ ಯೋಗ ಬಂದಾಗ ಎಂತಹ ಕಠಿಣ ಕೆಲಸಗಳೇ ಆಗಲೀ ಯಾವುದೇ ಅಡೆತಡೆ ಇಲ್ಲದೆ ಅವು ಪೂರ್ಣಗೊಳ್ಳುತ್ತವೆ.. ಎಂತಹದ್ದೇ ಸಮಸ್ಯೆ ಇದ್ದರೂ ಈ ಯೋಗ ಇರುವವರು ಆ ಸಮಸ್ಯೆಯಿಂದ ಮುಕ್ತಿ ಪಡೆಯುತ್ತಾರೆ.. ಇದೀಗ ಈ ಮಹಾಶಕ್ತಿಯೋಗವು ಐದು ರಾಶಿಗಳವರಿಗೆ ನಡೆಯುತ್ತಿದೆ.. ಆ ರಾಶಿಗಳು ಯಾವುವು..? ಅವರಿಗೆ ಇದರಿಂದ ಏನೆಲ್ಲಾ ಉಪಯೋಗವಾಗುತ್ತದೆ..? ನೋಡೋಣ ಬನ್ನಿ..

ಇದನ್ನೂ ಓದಿ; ಕೆಂಪು ಬದಲು ಮರೂನ್‌ ಲಿಪ್‌ಸ್ಟಿಕ್‌ ತಂದ ಗಂಡ; ಡಿವೋರ್ಸ್‌ ಕೇಳಿದ ಪತ್ನಿ!

ಮೇಷ ರಾಶಿ;
ಮೇಷರಾಶಿಯವರಿಗೆ ಹಣಕಾಸಿನ ಸಮಸ್ಯೆ ನಿವಾರಿಸುವ ಸಮಯವಿದು… ಇವರಿಗೆ ವ್ಯಯ ಸ್ಥಳದಲ್ಲಿ ರಾಹುವಿನ ಸಂಕ್ರಮಣವಾಗಿದೆ.. ಹೀಗಾಗಿ ಆರ್ಥಿಕ ಸಮಸ್ಯೆಗಳೆಲ್ಲಾ ಬಹುಬೇಗ ದೂರವಾಗುತ್ತವೆ.. ಈ ಸಮಯದಲ್ಲಿ ಮೇಷ ರಾಶಿಯವರು ಆದಾಯವನ್ನು ಹೆಚ್ಚಿಸಲು, ಆದಾಯದ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ.. ಮಹಾಶಕ್ತಿ ಯೋಗ ನಡೆಯುತ್ತಿರುವುದರಿಂದ ಆರೋಗ್ಯ ಸಮಸ್ಯೆಗಳು ಕೂಡಾ ಮೇಷರಾಶಿಯವರಿಗೆ ನಿವಾರಣೆಯಾಗುತ್ತವೆ.. ಚಿಕಿತ್ಸೆಗಾಗಿ ಆಗುತ್ತಿದ್ದ ಖರ್ಚುಗಳು ಕೂಡಾ ಕಡಿಮೆಯಾಗುತ್ತವೆ.. ವಿದೇಶ ಪ್ರವಾಸ ಕೈಗೊಳ್ಳಬೇಕೆಂದುಕೊಳ್ಳುವವರಿಗೆ ಈ ಸಮಯದಲ್ಲಿ ಯಾವುದೇ ಅಡೆತಡೆಗಳಿರುವುದಿಲ್ಲ..

ಮಿಥುನ ರಾಶಿ;
ಮಿಥುನ ರಾಶಿಯವರಿಗೆ ಕೂಡಾ ಮಹಾಶಕ್ತಿಯೋಗವಿದೆ.. ಹೀಗಾಗಿ, ಆದಾಯ ಗಣನೀಯ ಮಟ್ಟದಲ್ಲಿ ಹೆಚ್ಚಾಗುತ್ತದೆ.. ವ್ಯಯಸ್ಥಾನದಲ್ಲಿ ಮಂಗಳ ಸಂಕ್ರಮಣವಾಗಿರುವುದರಿಂದ ಆರ್ಥಿಕ ಸಮಸ್ಯೆಗಳೆಲ್ಲಾ ಮಾಯವಾಗುತ್ತವೆ.. ನಿಮ್ಮ ಪ್ರತಿಭೆಗೆ, ನೀವು ಮಾಡುವ ಕೆಲಸಕ್ಕೆ ಮನ್ನಣೆ ಸಿಗುತ್ತದೆ.. ನಿಮ್ಮ ಕೌಶಲ್ಯಕ್ಕೆ, ನೀವು ಹಿಡಿದ ಕೆಲಸಕ್ಕೆ ಹೆಚ್ಚಿನ ಬೇಡಿಕೆ ಬರುತ್ತದೆ.. ಇದರಿಂದಾಗಿ ಆರ್ಥಿಕ ಸಾಕಷ್ಟು ಲಾಭ ಬರಲು ಶುರುವಾಗುತ್ತದೆ.. ಕಠಿಣ ಪರಿಶ್ರಮಗಳನ್ನು ಮೈಗೂಡಿಸಿಕೊಂಡರೆ ದೊಡ್ಡ ಮಟ್ಟದ ಯಶಸ್ಸು ಕಾಣಬಹುದು.. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು, ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿರುವವರಿಗೆ ಉತ್ತಮ ಫಲ ಸಿಗಲಿದೆ.. ವೈಯಕ್ತಿಕ ಸಮಸ್ಯೆಗಳಲ್ಲದೆ, ಕೌಟುಂಬಿಕ ಸಮಸ್ಯೆಗಳು ಕೂಡಾ ಇಲ್ಲವಾಗುತ್ತವೆ..

ಸಿಂಹ;
ಸಿಂಹ ರಾಶಿಯವರಿಗೆ ವ್ಯಯ ಸ್ಥಾನದಲ್ಲಿ ರವಿ ಸಂಚಾರ ಮಾಡುತ್ತಿದ್ದಾನೆ.. ಇದರಿಂದಾಗಿ ಸಿಂಹ ರಾಶಿಯವರಲ್ಲಿ ಹೊಸ ಚೈತನ್ಯ ಮೂಡಲಿದೆ.. ಇದರಿಂದಾಗಿ ಎಲ್ಲಾ ಕೆಲಸಗಳಲ್ಲೂ ಆಸಕ್ತಿ ಹೆಚ್ಚಾಗಲಿದೆ.. ಇದರಿಂದ ಹಣಕಾಸಿನ ಪರಿಸ್ಥಿತಿಗಳು ಕೂಡಾ ಸಾಕಷ್ಟು ಸುಧಾರಿಸುತ್ತವೆ.. ಹಣದ ಉಳಿತಾಯ ಹೆಚ್ಚಾಗುತ್ತದೆ.. ಸರ್ಕಾರದಿಂದ ಆಗಬೇಕಿದ್ದ ಕೆಲಸಗಳು ಕೈಗೂಡುತ್ತವೆ.. ರಾಜಕೀಯದಲ್ಲಿದ್ದವರಿಗೆ ಉತ್ತಮ ಲಾಭವಾಗುತ್ತದೆ.. ಉದ್ಯೋಗ ಮಾಡುವವರಿಗೆ ಹಿರಿಯ ಅಧಿಕಾರಿಗಳಿಂದ ಆಗುತ್ತಿದ್ದ ತೊಂದರೆಗಳು ನಿವಾರಣೆಯಾಗುತ್ತವೆ.. ಇನ್ನು ಬ್ಯುಸಿನೆಸ್‌ ಮಾಡುತ್ತಿದ್ದವರಿಗೆ ಸ್ಪರ್ಧಿಗಳ ಕಾಟ ತಪ್ಪುತ್ತದೆ.. ಆರೋಗ್ಯ ಸಮಸ್ಯೆಗಳು ಕೂಡಾ ಇರೋದಿಲ್ಲ..

ಇದನ್ನೂ ಓದಿ; ರೀಲ್ಸ್‌ ಮಾಡುವಾಗ ದುರಂತ; 300 ಅಡಿ ಫಾಲ್ಸ್‌ಗೆ ಬಿದ್ದು ಯುವತಿ ಸಾವು!

ತುಲಾ;
ತುಲಾ ರಾಶಿಯ ನಿರುದ್ಯೋಗಿಗಳಿಗೆ ಈಗ ಉದ್ಯೋಗ ಸಿಗುವ ಸಮಯ.. ಬಯಸಿದ ಕೆಲಸಗಳು ಸಿಗುತ್ತವೆ.. ಯಾಕಂದ್ರೆ ಈ ರಾಶಿಯವರಿಗೆ ಈಗ ವ್ಯಯ ಸ್ಥಾನದಲ್ಲಿ ಕೇತು ಸಂಚಾರ ಮಾಡುತ್ತಿದ್ದಾನೆ.. ವಿದೇಶದಲ್ಲಿ ಉದ್ಯೋಗ ಮಾಡಬೇಕೆಂದಿರುವವರೂ ಕೂಡಾ ವಿದೇಶಕ್ಕೆ ಹೋಗಿ ಕೆಲಸ ಮಾಡಲು ಇದು ಸಕಾಲ.. ಯಾವುದಾದರೂ ಆಸ್ತಿ ವಿವಾದ ಇದ್ದಲ್ಲಿ, ಅವುಗಳು ಬಗೆಹರಿಯುತ್ತವೆ.. ಆದಾಯ ಮಾರ್ಗಗಳು ಸಾಕಷ್ಟಿದ್ದರೂ ಕೂಡಾ ಆದಾಯ ವೃದ್ಧಿ ಸಾಕಷ್ಟು ಹೋರಾಟ ಮಾಡಬೇಕಾದ ಅವಶ್ಯಕತೆ ಅಂತೂ ಇದ್ದೇ ಇದೆ.. ತೀರ್ಥಯಾತ್ರೆಗಳು, ವಿಹಾರ ಯಾತ್ರೆಗಳು ಹೋಗುವ ಬಯಕೆ ಇದ್ದವರಿಗೆ ಈಗ ಈಡೇರುವ ಸಮಯ. ದುಂದುವೆಚ್ಚಗಳಿಗೆ ಈಗ ಬ್ರೇಕ್‌ ಬೀಳಲಿದ್ದು, ಉಳಿತಾಯಕ್ಕೆ ಮಹತ್ವ ಸಿಗಲಿದೆ..

ಮೀನ;
ಮೀನ ರಾಶಿಯವರಿಗೆ ವ್ಯಯ ಸ್ಥಾನದಲ್ಲಿ ಶನಿ ಸಂಚಾರ ಮಾಡುತ್ತಿದ್ದಾನೆ.. ಹೀಗಾಗಿ ಈ ರಾಶಿಯವರು ಪರಿಶ್ರಮದಿಂದ ಕೆಲಸ ಮಾಡಿ ಎಲ್ಲಾ ಯಶಸ್ಸನ್ನೂ ಕಾಣುತ್ತಾರೆ.. ಯಾವುದೇ ಪ್ರಯತ್ನವನ್ನು ಕೂಡಾ ಛಲದಿಂದ ಮಾಡುತ್ತಾರೆ.. ಹಿಡಿದ ಕೆಲಸ ಸುಲಭವಾಗಿ ಪೂರ್ಣವಾಗುತ್ತದೆ.. ಎಲ್ಲರೂ ಕೂಡಾ ನಿಮಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ.. ಹಣಕಾಸಿನ ಸಮಸ್ಯೆಗಳು ಈಡೇರಲಿದ್ದು, ವಿದೇಶಕ್ಕೆ ಹೋಗುವ ಬಯಕೆಯೂ ಈಡೇರುತ್ತದೆ.. ನಿರುದ್ಯೋಗಿಗಳಿಗೆ ತಾವು ಬಯಸಿದ ಉದ್ಯೋಗ, ಸಂಬಳ ಸಿಗಲಿದೆ..

ಇದನ್ನೂ ಓದಿ; ಪ್ರೇಯಸಿಗಾಗಿ ಪತ್ನಿ, ಇಬ್ಬರು ಮಕ್ಕಳನ್ನು ಕೊಂದ ಫಿಸಿಯೋಥೆರಪಿಸ್ಟ್‌!

Share Post