Astrology

Horoscope; ಈ ರಾಶಿಯವರಿಗೆ ಈ ದಿನ ಅಶುಭ; ನಿಮ್ಮ ಇಂದಿನ ರಾಶಿ ಭವಿಷ್ಯ ಏನು..?

ಬೆಂಗಳೂರು; ಬಹುತೇಕರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ ನೋಡುತ್ತಾರೆ. ಭವಿಷ್ಯ ನೋಡಿಯೇ ಅವರ ದಿನಚರಿ ಆರಂಭವಾಗುತ್ತದೆ. ಅಂತಹವರಿಗಾಗಿ ನಾವು ದಿನ ಭವಿಷ್ಯವನ್ನು ನೀಡುತ್ತಿದ್ದೇವೆ. ಖ್ಯಾತ ಜ್ಯೋತಿಷಿ ಆನಂದ್‌ ಅವರು ಈ ದಿನ ಭವಿಷ್ಯವನ್ನು ನ್ಯೂಸ್‌ ಎಕ್ಸ್‌ ಕನ್ನಡಕ್ಕಾಗಿ ಬರೆದುಕೊಡುತ್ತಿದ್ದಾರೆ. ಹಾಗಾದ್ರೆ ಈ ದಿನದ ಭವಿಷ್ಯ ಹೇಗಿದೆ..? ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ..? ನೋಡೋಣ ಬನ್ನಿ… (Daily Horoscope)

ಮೇಷ ರಾಶಿ;

ಮೇಷ ರಾಶಿಯವರು ಈ ದಿನ ಭೂಮಿ ಖರೀದಿ ಅಥವಾ ಭೂಮಿ ಮಾರಾಟದಂತಹ ವ್ಯವಹಾರಗಳನ್ನು ಮಾಡದಿದ್ದರೆ ಒಳ್ಳೆಯದು. ಯಾಕಂದ್ರೆ ಭೂ ವ್ಯವಹಾರಗಳು ಇವತ್ತು ಮೇಷ ರಾಶಿಯವರಿಗೆ ಲಾಭ ತಂದುಕೊಡೋದಿಲ್ಲ. ಇನ್ನು ಇವತ್ತು ಮೇಷ ರಾಶಿಯವರು ಅಚಾನಕ್ಕಾಗಿ ಮನೆಯವರನ್ನೆಲ್ಲಾ ಹೊರಗೆ ಸುತ್ತಾಡಲು ಕರೆದುಕೊಂಡು ಹೋಗುತ್ತಾರೆ. ಇನ್ನು ಯಾವುದೇ ವ್ಯವಹಾರ ಮಾಡಬೇಕಾದರೂ ಹಿರಿಯರ ಜೊತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಯಾವುದಾದರೂ ಒಂದು ದೇವಿಯ ದರ್ಶನ ಪಡೆದುಕೊಂಡರೆ ಕೆಲಸಗಳನ್ನು ಪ್ರಾರಂಭಿಸಿದರೆ ಮೇಷ ರಾಶಿಯವರಿಗೆ ಶುಭಫಲವಿದೆ.

ವೃಷಭ ರಾಶಿ;

ವೃಷಭ ರಾಶಿಯವರು ತಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಗಮನವೇ ಕೊಡೋದಿಲ್ಲ. ಹಾಗೆ ನಿರ್ಲಕ್ಷ್ಯ ವಹಿಸಿದರೆ ಮುಂದೆ ನಿಮಗೇ ತೊಂದರೆಯಾಗಬಹುದು. ನಿಮ್ಮ ಸಂಗಾತಿಯ ಆರೋಗ್ಯ ವಿಚಾರಿಸಿ. ಜೊತೆಗೆ ಈದಿನ ನಿಮಗೆ ಉತ್ತಮ, ಇಂದು ನೀವು ಯಾವುದೇ ಹೊಸ ಪ್ರಯತ್ನ ಮಾಡಿದರೂ ಅದರಲ್ಲಿ ಸಕ್ಸಸ್‌ ಕಾಣುತ್ತೀರಿ. ಏನಾದರೂ ಆರಂಭಿಸುವುದಿದ್ದರೆ ಇಂದೇ ಆರಂಭ ಮಾಡಿ. ಅದಕ್ಕೂ ಮೊದಲ ಗಣಪತಿಯ ದರ್ಶನ ಮಾಡಿ.

ಮಿಥುನ ರಾಶಿ;
ಇವತ್ತು ಮಿಥುನ ರಾಶಿಯವರಿಗೆ ಕಂಟಕವಿದೆ. ವಿದ್ಯುತ್‌ ಉಪಕರಣಗಳನ್ನು ಮುಟ್ಟುವಾಗ, ವಿದ್ಯುತ್‌ ಉಪಕರಣಗಳ ಜೊತೆ ಕೆಲಸ ಮಾಡುವಾಗ ನೀವು ತುಂಬಾನೇ ಜಾಗರೂಕತೆಯಿಂದ ಇರಬೇಕಾಗುತ್ತದೆ. ಇಂದು ನೀವು ಹಲವಾರು ತಪ್ಪುಗಳನ್ನು ಮಾಡುತ್ತೀರಿ. ನಿಮ್ಮ ಸನಿಹ ಇರುವವರ ಜೊತೆ ಜಗಳ ಮಾಡಿಕೊಳ್ಳುತ್ತೀರಿ. ಇಡೀ ದಿನ ನಿಮ್ಮ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ. ಹೀಗಾಗಿ ಇಂದು ಯಾವುದೇ ಪ್ರಮುಖ ಕೆಲಸಕ್ಕೆ ಕೈ ಹಾಕದೇ ಇರುವುದು ಒಳ್ಳೆಯದು. ನಿಮ್ಮ ಹತ್ತಿರದ ದೇಗುಲಕ್ಕೆ ಹೋಗಿ ದೇವರ ದರ್ಶನ ಪಡೆದು ಬನ್ನಿ.

ಕಟಕ ರಾಶಿ;
ಕಟಕ ರಾಶಿಯವರು ಇವತ್ತು ಏನೇ ವ್ಯವಹಾರ ಮಾಡಿದರೂ ಉತ್ತಮ ಲಾಭ ಸಂಪಾದನೆ ಮಾಡುತ್ತೀರಿ. ನೀವು ಈಗಾಗಲೇ ಮಾಡುತ್ತಿರುವ ಕೆಲಸದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ. ಇಂದಿನ ನಿಮ್ಮ ವ್ಯವಹಾರ ಸಾಕಷ್ಟು ಯಶಸ್ವಿಗೆ ದಾರಿ ಮಾಡಿ ಕೊಡುತ್ತದೆ. ಇಂದು ನಿಮಗೆ ಅತ್ಯಂತ ಶುಭಕರವಾದ ದಿನ. ಜೊತೆಗೆ ಪ್ರೇಮಿಗಳು ಕೂಡಾ ಒಂದಾಗುವ, ಹಿರಿಯರು ನಿಮ್ಮ ಪ್ರೇಮಕ್ಕೆ ಒಪ್ಪಿಗೆ ಸೂಚಿಸುವ ದಿನ ಕೂಡಾ ಇದು. ಇಂದಿನಿಂದ ನಿಮಗೆ ಹಣ ಸಮಸ್ಯೆ ದೂರವಾಗುತ್ತಾ ಹೋಗುತ್ತದೆ. ನಿಮ್ಮೆಲ್ಲಾ ವ್ಯವಹಾರಗಳು ಸುಗಮವಾಗಲಿವೆ. ವಿದ್ಯಾರ್ಥಿಗಳು ಮಾತ್ರ ಓದಿನ ಕಡೆಗೆ ಹೆಚ್ಚಿನ ಆಸಕ್ತಿ ವಹಿಸುವುದು ಅಗತ್ಯವಾಗಿದೆ.

ಸಿಂಹ ರಾಶಿ;
ಸಿಂಹ ರಾಶಿಯವರಿಗೆ ಮನೆಯಲ್ಲಿ ಅಸಮಾಧಾನವೇ ಹೆಚ್ಚು. ನೀವು ಇವತ್ತು ಮನೆಯಲ್ಲೇ ಇದ್ದರೆ ನಿಮ್ಮ ಸಂಗಾತಿಯೊಂದಿಗೆ ಪದೇ ಪದೇ ಜಗಳವಾಡುತ್ತೀರಿ. ಹೀಗಾಗಿ, ಬೆಳಗ್ಗೆಯೇ ಹೊರಗೆ ಹೋಗಿ ಮಾಡಬೇಕಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು. ನೀವು ಹೆಚ್ಚಾಗಿ ದೂರು ಹೇಳುವವರನ್ನು, ಕಿವಿ ಚುಚ್ಚುವವರನ್ನು ನಂಬುತ್ತೀರಿ. ಇದರಿಂದಾಗಿ ನಮಗೆ ತೊಂದರೆಯಾಗಲಿದೆ. ಸುಮ್ಮನೆ ಚಿಂತೆ ಮಾಡುವುದು, ಯಾರೋ ಹೇಳಿದ್ದನ್ನು ಕೇಳುವ ಬದಲು ಸ್ವಂತ ಬುದ್ಧಿಯನ್ನು ಕೇಳಿ. ಕಠಿಣ ಪರಿಶ್ರಮದಿಂದ ಮಾತ್ರ ಗೆಲುವು ಸಾಧ್ಯ ಎಂಬುದನ್ನು ಮರೆಯದಿರಿ.

ಕನ್ಯಾ ರಾಶಿ;
ನೀವು ಹೆಚ್ಚು ಸ್ವಾರ್ಥಿಗಳು. ನಿಮ್ಮ ಅನುಕೂಲಕ್ಕಾಗಿ ನೀವು ಬೇರೆಯವರ ನೆಮ್ಮದಿಯನ್ನು ಬೇಕಾದರೂ ಹಾಳು ಮಾಡುತ್ತೀರಿ. ಇದರಿಂದ ನಿಮಗೆ ತಾತ್ಕಾಲಿಕ ಅನುಕೂಲವಾಗಬಹುದು. ಆದ್ರೆ ಇದರಿಂದ ನಿಮ್ಮ ವ್ಯವಹಾರಗಳಿಗೆ ತೊಂದರೆಯಾಗುತ್ತದೆ. ಜೊತೆಗೆ ಮನೆಯಲ್ಲಿ ಸಂಬಂಧಗಳು ಹಾಳಾಗಬಹುದು. ಹೀಗಾಗಿ ನಿಮ್ಮ ಸ್ವಭಾವದ ಬಗ್ಗೆ ನೀವು ಎಚ್ಚರಿಕೆ ವಹಿಸುವುದು ಅಗತ್ಯ. ಆದಷ್ಟು ಧ್ಯಾನ ಮಾಡುವುದನ್ನು ಕಲಿತುಕೊಳ್ಳಿ. ನಕಾರಾತ್ಮಕ ವಿಷಯಗಳನ್ನು ಆದಷ್ಟು ದೂರ ಮಾಡಿ. ಅಟ್‌ಲಿಸ್ಟ್‌ ಮನೆಯವರನ್ನಾದರೂ ನಂಬಿ. ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಿ.

ತುಲಾ ರಾಶಿ;
ಇಂದು ತುಲಾ ರಾಶಿಯ ಸಾಹಿತ್ಯ, ಕಲೆ ಇತ್ಯಾದಿ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಶುಭ ವಾರ್ತೆ ಸಿಗಲಿದೆ. ಇವತ್ತು ನೀವೇನಾದರೂ ಸಾಲ ಯಾರಿಗಾದರೂ ಕೊಟ್ಟರೆ ಅದು ವಾಪಸ್‌ ಬರೋದು ಡೌಟು ಎಚ್ಚರಿಕೆಯಿಂದ ಹೆಜ್ಜೆ ಇಡಿ. ಇನ್ನು ಬೆಳಗ್ಗೆಯೇ ಯಾವುದೋ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುತ್ತೀರಿ. ಆ ಕೆಲಸ ಆಗೋದು ಡೌಟು. ಸುಮ್ಮನೆ ಇವತ್ತಿನ ದಿನ ವೃತಾ ಆಗುವ ಸಾಧ್ಯತೆಯೇ ಹೆಚ್ಚಿದೆ. ಹೀಗಾಗಿ ಕುಲದೇವತೆಯ ಸ್ಮರಣೆ ಮಾಡಿಕೊಂಡು ದಿನ ಆರಂಭ ಮಾಡಿ.

ವೃಶ್ಚಿಕ ರಾಶಿ;
ದಾಂಪತ್ಯದಲ್ಲಿ ಏನಾದರೂ ತೊಂದರೆ ಇದ್ದರೆ ಅದು ಇಂದಿನಿಂದ ಸರಿದಾರಿಗೆ ಬರುತ್ತದೆ. ಆದ್ರೆ ಇಂದು ನೀವು ಮಾಡುವ ಹಲವು ಕೆಲಸಗಳಿಗೆ ಸಾಕಷ್ಟು ತೊಂದರೆಗಳಾಗುತ್ತವೆ. ಆದರೂ ಕೂಡಾ ನೀವು ಇಂದು ಜಯಗಳಿಸುತ್ತೀರಿ. ಆದ್ರೆ ನಿಮ್ಮ ವೃತ್ತಿಯಲ್ಲಿ ಇವತ್ತು ತೊಂದರೆ ಇದ್ದೇ ಇರುತ್ತದೆ. ಇದರಿಂದಾಗಿ ಯೋಚನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಎಲ್ಲಾ ದಿನವೂ ಒಂದೇ ರೀತಿಯಲ್ಲಿರುವುದಿಲ್ಲ. ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ. ಆರೋಗ್ಯ ಹಾಳಾದರೆ ಏನನ್ನೂ ಮಾಡೋದಕ್ಕೆ ಆಗೋದಿಲ್ಲ ನೆನಪಿನಲ್ಲಿರಲಿ.

ಧನುಸ್ಸು ರಾಶಿ;
ಇಂದಿನಿಂದ ನಿಮಗೆ ಯಶಸ್ಸು ಸಿಗುತ್ತಾ ಹೋಗುತ್ತದೆ. ನಿಂತುಹೋಗಿದ್ದ ಕೆಲಸಗಳಲ್ಲೇ ಇವತ್ತು ಆಗುತ್ತವೆ. ನಿಮ್ಮ ಪ್ರಾಮಾಣಿಕತೆಗೆ ಬೆಲೆ ಸಿಗೋದು ಕಡಿಮೆ. ಹೀಗಾಗಿ ಎಲ್ಲರಂತೆ ನಾವೂ ಇರಬೇಕು ಎಂದುಕೊಳ್ಳುತ್ತೀರಿ. ಆದ್ರೆ ಯಾವತ್ತೂ ನಿಮ್ಮ ಸ್ವಭಾವವನ್ನು ಬದಲಿಸಿಕೊಳ್ಳಲು ಹೋಗಬೇಡಿ. ಯಾಕಂದರೆ ನಿಮ್ಮಂತಹ ಸ್ವಭಾವ ತೀರಾ ಕಡಿಮೆ ಜನಕ್ಕೆ ಇರೋದು. ನಿಮ್ಮ ಇಷ್ಟ ದೇವತೆಯನ್ನು ಆರಾಧನೆ ಮಾಡಿ, ಹತ್ತಿರದಲ್ಲಿ ದೇಗುಲವಿದ್ದರೆ ದರ್ಶನ ಮಾಡಿಕೊಂಡು ಮನಸ್ಸು ಹಗುರ ಮಾಡಿಕೊಳ್ಳಿ.

ಮಕರ ರಾಶಿ;
ನೀವು ಮಾಡುವ ಕೆಲಸಕ್ಕೆ ನಿಮಗೆ ತೃಪ್ತಿ ಇದ್ದರೆ ಸಾಕು. ಯಾರೋ ಹೊಗಳಬೇಕು, ಯಾರನ್ನೋ ಮೆಚ್ಚಿಸಬೇಕು ಎಂದು ಹೋಗಬೇಡಿ. ಯಾಕಂದ್ರೆ, ನೀವು ಕೆಲಸ ಮಾಡುತ್ತಿರುವುದು ನಿಮಗಾಗಿ. ಯಾರನ್ನೋ ಮೆಚ್ಚಿಸೋದಕ್ಕೆ ಅಲ್ಲ. ನಿಮಗಾಗಿ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ಒಮ್ಮೆ ಯಶಸ್ಸು ನಿಮ್ಮದಾದರೆ, ಎಲ್ಲರೂ ಅವರಾಗೇ ಬಂದು ಹೊಗಳುತ್ತಾರೆ. ಸಂಬಂಧಿಕರು ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಬೇಕೆಂದರೆ ನೀವು ನಿಮ್ಮ ಕೆಲಸವನ್ನು ಮಾಡುತ್ತಾ ಯಶಸ್ಸು ಪಡೆದುಕೊಲ್ಳಬೇಕು.

ಕುಂಭ ರಾಶಿ;
ನಿಮಗೆ ಎಲ್ಲವೂ ಇದೆ. ಬದುಕೋದಕ್ಕೆ ಅಷ್ಟು ಸಾಕು. ಆಸಕ್ತಿ ವಹಿಸಿ ಮಾಡುವ ಕೆಲಸ ಚೆನ್ನಾಗಿ ಮಾಡಿದರೆ ಇನ್ನೂ ಯಶಸ್ಸು ಸಿಗುತ್ತದೆ. ಆದ್ರೆ ನೀವು ಬೇರೆ ಯಾರನ್ನೋ ನೋಡಿ ಹೊಟ್ಟೆ ಉರಿ ಪಟ್ಟುಕೊಳ್ಳುತ್ತೀರಿ. ಇದರಿಂದ ನಿಮ್ಮ ಸಂತೋಷ ಹಾಳಾಗುತ್ತದೆ ಅಷ್ಟೇ. ಇಂತಹ ವರ್ತನೆಯಿಂದ ನಿಮಗೆ ಯಾವ ಲಾಭವೂ ಇರದು. ದೇವರು ಏನೋ ಒಂದಷ್ಟು ಕೊಟ್ಟಿದ್ದಾನೆ. ಅದರಲ್ಲೇ ಚೆನ್ನಾಗಿ ಬದುಕುವುದನ್ನು ಕಲಿಯಿರಿ. ಮುಂದಿನ ದಿನಗಳಲ್ಲಿ ನಿಮಗೆ ಎಲ್ಲವೂ ಪ್ರಾಪ್ತಿಯಾಗುತ್ತಾ ಹೋಗುತ್ತದೆ.

ಮೀನ ರಾಶಿ;
ಇದು ನಿಮಗೆ ಅತ್ಯಂತ ಶುಭದಿನ. ಇವತ್ತು ನೀವು ಏನು ಮಾಡಿದರೂ ಕೂಡಾ ಅದರಲ್ಲಿ ಯಶಸ್ಸು ಕಾಣುತ್ತೀರಿ. ಉದ್ಯಮಗಳನ್ನು ನಡೆಸುವವರಿಗಂತೂ ತುಂಬಾ ಉತ್ತಮ ದಿನ. ಇಂದು ಹಲವಾರು ಪ್ರಾಜೆಕ್ಟ್‌ಗಳು ನಿಮಗೆ ಸಿಗಬಹುದು. ದೂರ ಹೋಗಿದ್ದ ಕ್ಲೈಂಟ್‌ಗಳು ಕೂಡಾ ವಾಪಸ್‌ ಬರಬಹುದು. ನಿಮ್ಮ ಆರೋಗ್ಯ ಚೆನ್ನಾಗಿ ಇದೆ. ದೇವರ ಕೃಪೆ ಇದೆ. ಹೀಗಾಗಿ ನೀವು ಆರೋಗ್ಯದ ಬಗ್ಗೆ ಚಿಂತೆ ಮಾಡೋದು ಬಿಡಿ. ಅದನ್ನು ದೇವರು ಕಾಪಾಡುತ್ತಾನೆ. ನೀವು ವ್ಯವಹಾರದಲ್ಲಿ ಮುನ್ನುಗ್ಗಿ ಸಾಕು.

Share Post