AstrologyLifestyle

Daily Horoscope; ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ ಗೊತ್ತಾ..?

ಕೋಟ್ಯಂತರ ಜನ ದಿನ ಭವಿಷ್ಯವನ್ನು ನಂಬುತ್ತಾರೆ.. ಬೆಳಗ್ಗೆ ಎದ್ದು ಪತ್ರಿಕೆಯಲ್ಲಿ ಪ್ರಕಟವಾದ ದಿನಭವಿಷ್ಯ ನೋಡಿ ತಮ್ಮ ದಿನ ಆರಂಭಿಸುತ್ತಾರೆ.. ಹೀಗಾಗಿ ನ್ಯೂಸ್‌ ಎಕ್ಸ್‌ ಕನ್ನಡ ಕೂಡಾ ದಿನಭವಿಷ್ಯ ನೀಡುತ್ತಿದೆ.. ಇವತ್ತು ಯಾವ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯೋಣ.. ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ ಇಂದು ಮೇಷರಾಶಿಯವರಿಗೆ ಮನೆ ಖರೀದಿ ಮಾಡಬೇಕಾದರೆ ಇದ್ದ ಎಲ್ಲಾ ಅಡ್ಡಿ ಆತಂಕಗಳೂ ಮರೆಯಾಗಿವೆಯಂತೆ.. ವೃಷಭರಾಶಿಯವರು ಆರ್ಥಿಕ ಸಮಸ್ಯೆಗಳಿಂದ ಹೊರಬರೋದಕ್ಕೆ ಇವತ್ತಿಂದ ಶುರುವಾಗುತ್ತದೆ.. ಹಾಗಾದರೆ ರಾಶಿವಾರು ಇಂದಿನ ಫಲಗಳೇನು..? ನೋಡೋಣ ಬನ್ನಿ..

ಇದನ್ನೂ ಓದಿ; ಈ ಹಾಲಿನ ಬಣ್ಣ ಕಡು ಕಪ್ಪು..!; ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು..!

ಮೇಷ;
ಮೇಷರಾಶಿಯವರಿಗೆ ಇವತ್ತು ಒಳ್ಳೆಯ ದಿನ.. ನಿನ್ನ ವೃತ್ತಿಯಲ್ಲಿ ಅಥವಾ ವ್ಯವಹಾರದಲ್ಲಿ ಯಾವುದಾದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕು ಅಂತಿದ್ದರೆ ಇವತ್ತು ಅದನ್ನು ಮಾಡಬಹುದು, ಅದರಿಂದ ನಿಮಗೆ ಲಾಭವಿರುತ್ತದೆ.. ಜೊತೆಗೆ ಮನೆ, ಆಸ್ತಿ ಕೊಳ್ಳಬೇಕೆಂದುಕೊಂಡು ಅದ್ರಲ್ಲಿ ಅಡ್ಡಿ ಆತಂಕಗಳಿದ್ದರೆ, ಇವತ್ತು ಎಲ್ಲಾ ಅಡ್ಡಿಗಳೂ ನಿವಾರಣೆಯಾಗಲಿವೆ.. ಇವತ್ತು ನಿಮಗೆ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಗುತ್ತದೆ.. ಇದರ ಜೊತೆಗೆ ವಾಹನ ಯೋಗವೂ ಕೂಡಾ ಇದೆ..
ವೃಷಭ;
ಇವತ್ತು ವೃಷಭರಾಶಿಯವರಿಗೆ ಕೊಂಚ ಆರ್ಥಿಕ ಸಹಾಯಗಳು ದೊರೆಯಲಿವೆ.. ಇದರಿಂದಾಗಿ ಹಣಕಾಸಿನ ಸಮಸ್ಯೆಗಳಿಂದ ಕೊಂಚ ನೆಮ್ಮದಿ ಸಿಗಲಿದೆ.. ವೈಯಕ್ತಿಕ ಹಾಗೂ ಆರೋಗ್ಯ ಸಮಸ್ಯೆಗಳಿಗೂ ಇಂದು ಪರಿಹಾರ ಸಿಗುತ್ತದೆ.. ಇವರ ವ್ಯಾಪಾರ ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ.. ಮದುವೆ ಪ್ರಯತ್ನಗಳು ನಡೆಯುತ್ತಿದ್ದರೆ ಇಂದು ಶುಭ ಸುದ್ದಿ ಸಿಗಲಿದೆ.. ಕುಟುಂಬದ ಸದಸ್ಯರಿಂದಲೇ ನೀವು ಇವತ್ತು ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ..
ಮಿಥುನ;
ಮಿಥುನ ರಾಶಿಯವರು ಖರ್ಚುಗಳನ್ನು ಸರಿದೂಗಿಸಿಕೊಳ್ಳಲು ಸಾಲ ಪಡೆಯಲು ಮುಂದಾಗಬಹುದು.. ನೀವು ಇಂದು ಯಾವುದಾದರೂ ದೃಢ ನಿರ್ಧಾರ ತೆಗೆದುಕೊಂಡು ನಿಂತುಹೋಗಿದ್ದ ಪ್ರಮುಖ ವ್ಯವಹಾರಗಳ ಮಾತುಕತೆ ಮಾಡಿದರೆ ಅದು ಕ್ಲೋಸ್‌ ಮಾಡಿಕೊಳ್ಳಬಹುದು.. ಕುಟುಂಬದ ಸದಸ್ಯರಿಗಾಗಿ ಇಂದು ಹೆಚ್ಚು ಖರ್ಚು ಮಾಡುವ ಸಾಧ್ಯತೆಯೇ ಹೆಚ್ಚಿದೆ.. ನಿಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕಾಗುತ್ತದೆ.. ಯಾರನ್ನೂ ಅತಿಯಾಗಿ ನಂಬಬೇಡಿ.. ಯಾಕಂದ್ರೆ, ಎಲ್ಲರನ್ನೂ ನಂಬುತ್ತಾ ಹೋದರೆ ನಿಮ್ಮ ಖರ್ಚುಗಳು ಜಾಸ್ತಿಯಾಗುತ್ತಾ ಹೋಗುತ್ತವೆ.. ಆದ್ರೆ ಆದಾಯ ಮಾತ್ರ ಸ್ಥಿರವಾಗಿರುತ್ತದೆ..

ಇದನ್ನೂ ಓದಿ; ಅಂದುಕೊಂಡಂತೆ ಬದುಕಲಾಗದೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

ಕರ್ಕಾಟಕ;
ಕರ್ಕಾಟಕ ರಾಶಿಯವರು ಇಂದು ಯಾವುದೇ ವ್ಯವಹಾರಗಳು ಮಾಡಿದರೂ ಇಂದು ಸಾಕಷ್ಟು ಲಾಭವಾಗಲಿದೆ.. ಹಿಡಿದ ಕೆಲಸ ಇಂದು ಯಶಸ್ವಿಯಾಗಲಿದೆ.. ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಪ್ರಗತಿಯನ್ನು ಕಾಣುತ್ತೀರಿ.. ಉದ್ಯೋಗದ ಸ್ಥಳದಲ್ಲಿ ನಿಮಗೆ ಎಲ್ಲರಿಂದಲೂ ಬೆಂಬಲ ಸಿಗುವುದರಿಂದ ನಿಮ್ಮ ಪ್ರಗತಿಗೆ ದಾರಿ ಮಾಡಿಕೊಡುತ್ತದೆ.. ಸಂಗಾತಿಯೊಂದಿಗೆ ಶಾಪಿಂಗ್‌ಗೆ ಹೋಗುವ ಸಾಧ್ಯತೆ ಇದೆ.. ನೆನೆಗುದಿಗೆ ಬಿದ್ದಿದ್ದ ಕೆಲಸಗಳೆಲ್ಲಾ ಇಂದು ಪೂರ್ಣವಾಗುವ ಅವಕಾಶವಿದೆ..
ಸಿಂಹ;
ನೀವು ಯಾವುದೇ ವ್ಯವಹಾರ ಶುರು ಮಾಡಿದರೆ ಕಡಿಮೆ ಶ್ರಮದಲ್ಲಿ ಹೆಚ್ಚು ಲಾಭ ಗಳಿಸುತ್ತೀರಿ.. ನಿರುದ್ಯೋಗಿ ಸಿಂಹರಾಶಿಯವರಿಗೆ ಇಂದು ಉದ್ಯೋಗ ಸಿಗುವ ಅವಕಾಶವೂ ಹೆಚ್ಚಿದೆ.. ನಿಮ್ಮ ನಿರೀಕ್ಷೆ ಮೀರಿ ಇಂದು ಲಾಭಗಳಾಗುವ ಸಾಧ್ಯತೆಯೇ ಹೆಚ್ಚು.. ಕೌಟುಂಬಿಕ ಜೀವನ ಸಾಕಷ್ಟು ಸುಖಮಯವಾಗಿದ್ದು, ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ.. ಇನ್ನು ಸಿಂಹರಾಶಿಯ ಕೆಲವರು ಇಂದು ಬಾಲ್ಯದ ಸ್ನೇಹಿತರ ಜೊತೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಕೂಡಾ ಇದೆ..
ಕನ್ಯಾ;
ಕನ್ಯಾ ರಾಶಿಯವರ ಆರ್ಥಿಕ ಪರಿಸ್ಥಿತಿ ಕೂಡಾ ಇವತ್ತು ತುಂಬಾನೇ ಸುಧಾರಿಸಲಿದೆ.. ಇಂದು ಹಲವು ಕಡೆಗಳಿಂದ ಧನಾಗಮವಾಗಲಿದ್ದು, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಅಡತಡೆಗಳೆಲ್ಲಾ ಮಾಯವಾಗಲಿವೆ.. ಇವತ್ತು ನಿಮಗೆ ಬಿಡುವಿಲ್ಲದ ಕೆಲಸಗಳಿರುತ್ತವೆ.. ಇದರ ನಡುವೆಯೇ ಇಂದು ಆಗಬೇಕಿರುವ ಪ್ರಮುಖ ಕೆಲಸಗಳನ್ನು ಇಂದೇ ಮುಗಿಸುವಿರಿ.. ವ್ಯಾಪಾರದಲ್ಲಿ ಇಂದು ಕೊಂಚ ಲಾಭ ಕಾಣಲಿದ್ದೀರಿ, ಇದೂ ಕೂಡಾ ನಿಮ್ಮ ಮನಸ್ಸಿಗೆ ನೆಮ್ಮದಿ ತರಿಸಬಹುದು.. ಆದಷ್ಟು ಯಾವುದೇ ನಿರ್ಧಾರ ಕೈಗೊಳ್ಳಬೇಕಾದರೆ ಸಾಕಷ್ಟು ಯೋಚನೆ ಮಾಡಿ ನಿರ್ಧರಿಸುವುದು ಒಳ್ಳೆಯದು.. ಒಟ್ಟಾರೆಯಾಗಿ ಇಂದು ನಿಮ್ಮ ಪರಿಸ್ಥಿತಿ ತುಂಬಾನೇ ಆಶಾದಾಯಕವಾಗಿದೆ..

ಇದನ್ನೂ ಓದಿ; ಬೆಂಗಳೂರು ಕೋರ್ಟ್‌ ಆವರಣದಲ್ಲಿ ವಕೀಲೆಗೆ ಚಾಕು ಇರಿತ!

ತುಲಾ;
ತುಲಾ ರಾಶಿಯವರು ವ್ಯಾಪಾರ, ವ್ಯವಹಾರದ ನಿಮಿತ್ತ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಹೆಚ್ಚು.. ಆದ್ರೆ ಇದರಿಂದ ನಿಮಗೆ ತೊಂದರೆಗಳೇ ಹೆಚ್ಚಿರುತ್ತವೆ ಆದರೂ ಯಾವುದೇ ಲಾಭವಂತೂ ಆಗೋದಿಲ್ಲ.. ಇದರ ನಡುವೆಯೂ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಲಿವೆ.. ನಿಮ್ಮ ವ್ಯವಹಾರದಲ್ಲಿ ಒಂದಷ್ಟು ಲಾಭ ನಿರೀಕ್ಷೆ ಮಾಡಬಹುದು.. ಆದಷ್ಟು ನಷ್ಟದ ವ್ಯವಹಾರಗಳಿಂದ ಕೊಂಚ ದೂರವಿರುವುದೇ ನಿಮಗೆ ಉತ್ತಮ ಎಂದು ಹೇಳಬಹುದು.. ನೀವು ಯೋಚಿಸಿ ಕೈಗೆತ್ತಿಕೊಂಡ ಕೆಲಸಗಳು ಸುಗಮವಾಗಿ ಸಾಗಲಿವೆ..
ವೃಶ್ಚಿಕ;
ವೃಶ್ಚಿಕ ರಾಶಿಯವರಿಗೆ ತುಂಬಾ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ವಿವಾದಗಳಿಗೆ ಇಂದು ಪರಿಹಾರ ಸಿಗಲಿದೆ.. ಹೊಸ ವಾಹನ ಖರೀದಿ ಮಾಡುವ ಯೋಗ ನಿಮ್ಮದಾಗಬಹುದು.. ಕೆಲಸದಲ್ಲಿ ಒತ್ತಡಗಳು ಹೆಚ್ಚಿದ್ದರೆ ಅವು ಇಂದು ನಿವಾರಣೆಯಾಗುತ್ತವೆ.. ಆರೋಗ್ಯದಲ್ಲಿ ಪ್ರಗತಿ ಸಿಗಲಿದೆ.. ನಿಮ್ಮ ಬಳಿ ಯಾವಾಗಲೋ ಸಾಲ ಪಡೆದಿದ್ದವರು ವಾಪಸ್‌ ಕೊಡುವ ಕಾಲ ಇದು.. ಕುಟುಂಬದ ಸದಸ್ಯರ ಜೊತೆ ಇಂದು ನೀವು ದೇವರ ದರ್ಶನ ಪಡೆಯುವ ಎಲ್ಲಾ ಸಾಧ್ಯ ಇದೆ..
ಧನು;
ನಿಮಗೆ ಆಧ್ಯಾತ್ಮಿಕದತ್ತ ಒಲವು ಹೆಚ್ಚಾಗುತ್ತದೆ.. ಆಸ್ತಿ ವ್ಯಾಜ್ಯಗಳಿದ್ದರೆ ಅವುಗಳಿಗೆ ಇವತ್ತೇ ಪರಿಹಾರ ಸಿಗುತ್ತದೆ.. ಆರೋಗ್ಯ ಸಮಸ್ಯೆಗಳು ಕೂಡಾ ನಿವಾರಣೆಯಾಗಿ ನೆಮ್ಮದಿ ನೆಲೆಸುತ್ತದೆ.. ಎಲ್ಲಾ ದಿನಗಳೂ ಹೀಗೆ ಇದ್ದರೆ ಚೆನ್ನ ಎಂದೆನಿಸುತ್ತದೆ ನಿಮಗೆ.. ಕೌಟುಂಬಿಕ ಸಾಮರಸ್ಯ ಕೂಡಾ ತುಂಬಾನೇ ಚೆನ್ನಾಗಿರುತ್ತದೆ.. ವೃತ್ತಿಯನ್ನು ಬದಲಿಸಲು ಅಥವಾ ವ್ಯಾಪಾರ ವ್ಯವಹಾರವನ್ನು ವಿಸ್ತರಣೆ ಮಾಡಲು ಯೋಚಿಸುತ್ತಿರುವವರಿಗೆ ಇದು ಸಕಾಲ… ಕೆಲಸಗಳು ಹೆಚ್ಚಾಗಿ ಮಾನಸಿಕ ಒತ್ತಡ ಕೂಡಾ ಶುರುವಾಗಬಹುದು.. ಇದಕ್ಕಾಗಿ ಧ್ಯಾನ ಮಾಡಿ..

ಇದನ್ನೂ ಓದಿ; ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಚೊಂಬು ಸಿಕ್ಕಿದೆ; ಸಿಎಂ ಸಿದ್ದರಾಮಯ್ಯ

ಮಕರ;
ನೀವು ಕೈಗೊಂಡು ಯಾವುದೇ ಕೆಲಸದಲ್ಲಿ ನಿಮಗೆ ಅನಿರೀಕ್ಷಿತ ಯಶಸ್ಸು ಸಿಗಲಿದೆ.. ಇವತ್ತು ನಿಮಗೆ ಎಲ್ಲಾ ಕಡೆಯಿಂದಲೂ ಆದಾಯ ಒದಗಿಬರಲಿದೆ.. ವೃತ್ತಿಯಲ್ಲಿ ಅಥವಾ ವ್ಯವಹಾರದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡರೆ ನಿಮಗೆ ಆರ್ಥಿಕವಾಗಿ ಸಾಕಷ್ಟು ಲಾಭವಾಗಲಿದೆ.. ಉದ್ಯೋಗ ಜೀವನದಲ್ಲಿ ಸಾಕಷ್ಟು ಯಶಸ್ಸು ಸಿಗಲಿದೆ.. ಸಣ್ಣ ಅನಾರೋಗ್ಯ ಸಮಸ್ಯೆಗಳು ಏರ್ಪಟ್ಟರೂ ಅವು ನಿವಾರಣೆಯಾಗಲಿವೆ.. ನಿಮಗೆ ಇಂದು ಹಠಾತ್‌ ಹಣಕಾಸಿನ ಲಾಭದ ಬರಲಿದ್ದು, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ ಉಳಿತಾಯ ಮಾಡುವುದು ಒಳ್ಳೆಯದು..
ಕುಂಭ;
ನಿಮಗೆ ಸಾಕಷ್ಟು ಗೌರವ ಸಿಗುತ್ತದೆ.. ಆದ್ರೆ ನಂಬಿದವರೇ ನಿಮಗೆ ಮೋಸ ಮಾಡುತ್ತಾರೆ.. ಇವತ್ತು ನೀವೇನಾದರೂ ಪ್ರಯಾಣ ಕೈಗೊಂಡರೆ ಆಗುವ ನಷ್ಟಗಳು ತಪ್ಪುತ್ತವೆ.. ವ್ಯವಹಾರದಲ್ಲಿ ಲಾಭದ ನಿರೀಕ್ಷೆ ಮಾಡಬಹುದು.. ಆದ್ರೆ ಆರೋಗ್ಯದ ಕಡೆ ಹೆಚ್ಚು ಗಮನ ಇಡುವುದು ತುಂಬಾನೇ ಒಳ್ಳೆಯದು..
ಮೀನ;
ಮೀನ ರಾಶಿಯವರ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಇವತ್ತು ನಿಮ್ಮ ಹಣಕಾಸಿನ ವ್ಯವಹಾರಗಳು ಯಶಸ್ವಿಯಾಗಿ ಮುನ್ನಡೆಯುತ್ತವೆ. ಬಟ್ಟೆ ಮತ್ತು ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಾಗುತ್ತದೆ. ನಿರುದ್ಯೋಗಿಗಳಿಗೆ ಸಮಯವು ತುಂಬಾ ಅನುಕೂಲಕರವಾಗಿದೆ. ಮನೆಯಲ್ಲಿ ಶುಭ ಕಾರ್ಯಗಳನ್ನು ಯೋಜಿಸಲಾಗಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ಸಾಹದಿಂದ ಮುನ್ನಡೆಯುವರು. ಉದ್ಯೋಗದಲ್ಲಿ ನೀವು ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ಆರೋಗ್ಯ ಸುಸ್ಥಿರವಾಗಿದೆ.

Share Post