BengaluruCrime

ಅಂದುಕೊಂಡಂತೆ ಬದುಕಲಾಗದೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

ನೆಲಮಂಗಲ; ಕುಟುಂಬದ ಆದಾಯ ತುಂಬಾ ಕಡಿಮೆ ಇದೆ.. ಅಂದುಕೊಂಡಂತೆ ಬದುಕು ನಡೆಯುತ್ತಿಲ್ಲ ಅಂತ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಪತಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, 8 ವರ್ಷದ ಮಗಳ ಗೋಳಾಟದಿಂದ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಗಿದೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್‌ನ ಅರಿಶಿನಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ..
30 ವರ್ಷ ನಂದಿನಿ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿಯಾಗಿದ್ದಾಳೆ.. 9 ವರ್ಷದ ಹಿಂದೆ ನಂದಿನಿ ಖಾಸಗಿ ಶಾಲಾ ಬಸ್‌ ಚಾಲಕ ಸುನಿಲ್‌ ಎಂಬಾತನನ್ನು ಮದುವೆಯಾಗಿದ್ದಳು.. ನಂದಿನಿ ಬಿಕಾಂ ಓದಿದ್ದರೆ, ಸುನಿಲ್‌ ಬಿಎ ಮುಗಿಸಿದ್ದ.. ಸುನಿಲ್‌ ಶಾಲಾ ವಾಹನ ಚಾಲನೆ ಮಾಡುತ್ತಾ ಬಂದ ಸಂಬಳದಲ್ಲಿ ಹೇಗೋ ಸಂಸಾರ ನಡೆಯುತ್ತಿತ್ತು.. ಆದ್ರೆ, ತುಂಬಾ ಚೆನ್ನಾಗಿ ಬದುಕುವ ಕನಸು ಕಂಡಿದ್ದ ನಂದಿನಿ ದಿನವೂ ಈ ಬಗ್ಗೆ ಯೋಚನೆ ಮಾಡುತ್ತಿದ್ದಳು ಎನ್ನಲಾಗಿದೆ.. ಹೀಗಾಗಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗ್ತಿದೆ..

Share Post