BengaluruCrime

ಬೆಂಗಳೂರು ಕೋರ್ಟ್‌ ಆವರಣದಲ್ಲಿ ವಕೀಲೆಗೆ ಚಾಕು ಇರಿತ!

ಬೆಂಗಳೂರು; ಬೆಂಗಳೂರು ನಗರದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಆವರಣದಲ್ಲಿ ಅನಾಹುತವೊಂದು ನಡೆದಿದೆ.. ವ್ಯಕ್ತಿಯೊಬ್ಬ ಕೋರ್ಟ್‌ ಆವರಣದಲ್ಲೇ ವಕೀಲೆಯೊಬ್ಬರಿಗೆ ಚಾಕುವಿನಿಂದ ಇರಿದಿದ್ದು ಕೊಲೆ ಮಾಡಲು ಯತ್ನಿಸಿದ್ದಾನೆ.. ಚಾಕುವಿನಿಂದ ಇರಿದಿದ್ದರಿಂದ ತೀವ್ರವಾಗಿ ಗಾಯಗೊಂಡಿರುವ ವಕೀಲೆ ವಿಮಲಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. ಆದ್ರೆ ಅವರ ಪರಿಸ್ಥಿತಿ ಗಂಭಿರವಾಗಿದೆ ಎಂದು ತಿಳಿದುಬಂದಿದೆ..
ಜಯರಾಮ ಎಂಬಾತನೇ ಈ ಕೊಲೆ ಯತ್ನ ಮಾಡಿರುವ ಆರೋಪಿ.. ವಕೀಳೆ ವಿಮಲಾಗೂ ಜಯರಾಮ್‌ಗೆ ಸ್ನೇಹವಿದೆ.. ವಕೀಲೆ ವಿಮಾನ ಜೊತೆಗಿನ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿಕೊಂಡಿದ್ದ ಆತ, ಬ್ಲ್ಯಾಕ್‌ ಮೇಲ್‌ ಮಾಡಿ ಹಂತ ಹಂತವಾಗಿ ಒಂದೂವರರೆ ಕೋಟಿ ರೂಪಾಯಿ ಹೆಚ್ಚು ಹಣ ಕಿತ್ತಿದ್ದ ಎಂದು ತಿಳಿದುಬಂದಿದೆ.. ಇನ್ನೊಂದೆಡೆ ಹೆಜ್ಜಾಲ ಬಳಿಯ ಜಾಗದ ವಿಚಾರವಾಗಿ ಇಬ್ಬರಿಗೂ ಗಲಾಟೆಯಾಗಿತ್ತು ಎಂದು ಹೇಳಲಾಗಿದೆ.. ಈ ಕಾರಣಕ್ಕಾಗಿಯೇ ಕೊಲೆ ಯತ್ನ ನಡೆದಿದೆ ಎನ್ನಲಾಗ್ತಿದೆ..
ಆರೋಪಿ ಜಯರಾಮ್‌ನನ್ನು ಹಲಸೂರು ಗೇಟ್‌ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ..

Share Post