BengaluruLifestyle

ಬಿಗ್‌ಬಾಸ್‌ನಿಂದ ಹೊರಬಂದ ಲಾಯರ್‌ ಜಗದೀಶ್‌ ಕ್ಷಮೆ ಕೇಳಿದ್ದು ಯಾರಿಗೆ..?

ಬೆಂಗಳೂರು; ಬಿಗ್‌ ಬಾಸ್‌ ನಿಂದ ಲಾಯರ್‌ ಜಗದೀಶ್‌ ಹೊರಬಿದ್ದಿದ್ದಾರೆ.. ಬಿಗ್‌ಬಾಸ್‌ ನಿಯಮಗಳನ್ನು ಮುರಿಯುತ್ತಲೇ ಬಂದಿದ್ದ ಜಗದೀಶ್‌, ಏಕ ವಚನದಲ್ಲೇ ಮಾತನಾಡುತ್ತಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.. ಇದೀಗ ಅವರು ಬಿಗ್‌ಬಾಸ್‌ ಮನೆಯಿಂದ ಹೊರಬಂದಿದ್ದಾರೆ.. ಬಿಗ್‌ಬಾಸ್‌ ಮನೆಯ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಜಗದೀಶ್‌ರನ್ನು ಹೊರಗೆ ಕಳುಹಿಸಲಾಗಿದೆ.. ಹೊರಗೆ ಬಂದ ಮೇಲೆ ಜಗದೀಶ್‌ ಎಂದಿನ ಶೈಲಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ..

ನನ್ನ ಹೀರೋ ಸುದೀಪ್‌ ಎಂದಿರುವ ಜಗದೀಶ್‌, ಸುದೀಪ್‌ ಅವರೇ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.. ಇನ್ನು ಬಿಗ್‌ಬಾಸ್‌ ಮನೆಯ ರಂಜಿತ್‌, ಮಾನಸ ಎಲ್ಲರೂ ನನ್ನನ್ನು ಕ್ಷಮಿಸಬೇಕು ಎಂದಿದ್ದಾರೆ.. ನೀವು ಅದ್ಭುತ ಕಲಾವಿದರು.. ನಾನು ನಿಮ್ಮ ಜೊತೆ ಒಬ್ಬನಾಗಿ ನಗೋದಕ್ಕೆ ಪ್ರಯತ್ನ ಪಟ್ಟೆ ಅಷ್ಟೇ.. ಕೆಲವು ತಪ್ಪುಗಳು ನನ್ನಿಂದ ಆಗಿ ಕ್ಷಮಿಸಿ ಎಂದು ಲಾಯರ್‌ ಜಗದೀಶ್‌ ಕೇಳಿಕೊಂಡಿದ್ದಾರೆ..

Share Post