CrimeNational

ಬೈಕ್‌ ನಿಧಾನಕ್ಕೆ ಓಡಿಸಪ್ಪ ಎಂದಿದ್ದಕ್ಕೆ ಕೊಲೆಯೇ ಮಾಡಿಬಿಟ್ಟ!

ಹೈದರಾಬಾದ್‌; ಬೈಕ್‌ ನಿಧಾನವಾಗಿ ಓಡಿಸಪ್ಪ ಎಂದು ಹೇಳಿದ್ದ ಆಕ್ರೋಶಗೊಂಡ ಬೈಕ್‌ ಸವಾರ ವೃದ್ಧನನ್ನು ಒಂದೇ ಏಟಿ ಕೊಲೆ ಮಾಡಿ ಮಲಗಿಸಿದ್ದಾನೆ.. ಹೈದರಾಬಾದ್‌ನ ಅಲ್ವಾಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.. ಸೆಪ್ಟೆಂಬರ್‌ 30ರಂದು ರಾತ್ರಿ ವೃದ್ಧರೊಬ್ಬರು ರಸ್ತೆ ದಾಟುತ್ತಿದ್ದರು.. ಈ ವೇಳೆ ಬೈಕ್‌ ವೇಗವಾಗಿ ಬಂದಿದೆ.. ಹೀಗಾಗಿ ವೃದ್ಧ ಸ್ವಲ್ಪ ನಿಧಾನಕ್ಕೆ ಓಡಿಸಪ್ಪ ಎಂದು ಹೇಳಿದ್ದಾನೆ.. ಅದಕ್ಕೇ ಕೊಲೆ ಮಾಡಲಾಗಿದೆ..
ಬೈಕ್‌ ಸವಾರ ಗಟ್ಟಿ ಒಂದು ಏಟು ಹೊಡೆದಿದ್ದಾನೆ.. ಇದರಿಂದಾಗಿ ವೃದ್ಧ ಮೂರ್ಛೆ ತಪ್ಪಿ ಬಿದ್ದಿದ್ದರು.. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಾವನ್ನಪ್ಪಿದ್ದಾರೆ.. @jsuryareddy ಎಂಬ ಟ್ವಿಟರ್​ ಖಾತೆಯಲ್ಲಿ ಘಟನೆಗೆ ಸಂಬಂಧಿಸಿದ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿಗಳನ್ನು ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ.

Share Post