BengaluruCrime

ಬೆಂಗಳೂರಿನಲ್ಲಿ ಜಮ್ಮು ಮೂಲದ ವ್ಯಕ್ತಿ ಬಂಧನ

ಬೆಂಗಳೂರು; ಬೆಂಗಳೂರಿನ ಶ್ರೀರಾಮಪುರದಲ್ಲಿ ನೆಲೆಸಿದ್ದ ವ್ಯಕ್ತಿಯೊಬ್ಬನನ್ನು ಜಮ್ಮು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲಿಬ್ ಹುಸೇನ್ ಎಂಬಾತನೇ ಸಿಕ್ಕಿಬಿದ್ದಿರುವ ವ್ಯಕ್ತಿ.

ಈತ  ಎರಡು ವರ್ಷಗಳಿಂದ ಹುಸೇನ್ ನಗರದ ಶ್ರೀರಾಮಪುರದಲ್ಲಿ ವಾಸವಿದ್ದ. ಆರೋಪಿ ಮೂಲತಃ ಜಮ್ಮು ನಿವಾಸಿ ಎಂದು ತಿಳಿದುಬಂದಿದೆ. ಎಂಟು ದಿನದ ಹಿಂದೆ ಪೊಲೀಸರು ಆರೋಪಿ ತಾಲಿಬ್ ಹುಸೇನ್ ವಶಕ್ಕೆ ಪಡೆದುಕೊಂಡು ಜಮ್ಮು ಕಾಶ್ಮೀರಕ್ಕೆ ಕರೆದೊಯ್ದಿದ್ದು, ತಡವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಆದ್ರೆ ಏನಕ್ಕೆ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂಬುದು ತಿಳಿದುಬಂದಿಲ್ಲ.

Share Post