BengaluruCrime

ನಾನು ಯಾವುದೇ ತನಿಖೆಗೆ ಸಿದ್ಧನಿದ್ದೇನೆ; ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

ಬೆಂಗಳೂರು; ಜನಪ್ರತಿನಿಧಿಗಳ ಕೋರ್ಟ್‌ ಆದೇಶದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮಾತುಗಳು ಈ ಕೆಳಗಿನಂತೆ ಇವೆ..
ಹೈಕೋರ್ಟ್‌ ಕೊಟ್ಟಿರುವ ಆದೇಶದ ಮೇಲೆ ಜನಪ್ರತಿನಿಧಿಗಳ ಕೋರ್ಟ್‌ ಆದೇಶ ನೀಡಿದೆ
17A ಪ್ರಕಾರ ತನಿಖೆ ಮಾಡಿ ಎಂದು ಹೈಕೋರ್ಟ್‌ ಹೇಳಿದೆ
ಜನಪ್ರತಿನಿಧಿಗಳ ಕೋರ್ಟ್‌ನ ಪ್ರತಿ ನನಗೆ ಸಿಕ್ಕಿಲ್ಲ, ಪೂರ್ತಿ ಆದೇಶ ಸಿಕ್ಕಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ
ನಾನು ವಿಚಾರಣೆ ಎದುರಿಸುವುದಕ್ಕೆ ತಯಾರಿದ್ದೇವೆ, ತನಿಖೆಗಳಿಗೆ ನಾವು ಹೆದರುವುದಿಲ್ಲ

ಕಾನೂನು ಹೋರಾಟಕ್ಕೆ ನಾವು ತಯಾರಿದ್ದೇವೆ. ನಿನ್ನೆಯೂ ನಾನು ಇದನ್ನೇ ಹೇಳಿದ್ದೇನೆ
ಮೈಸೂರು ಲೋಕಾಯುಕ್ತಕ್ಕೆ ತನಿಖೆಗೆ ಆದೇಶ ನೀಡಲಾಗಿದೆ
ಹೈಕೋರ್ಟ್‌ ತನಿಖೆ ಮಾಡಿ ಎಂದು ಹೇಳಿದೆ, ಅದರ ಪ್ರಯುಕ್ತ ಈ ಆದೇಶ ಬಂದಿದೆ
ಮೇಲ್ಮನವಿಗೆ ಸಂಬಂಧಿಸಿದಂತೆ ಇನ್ನೂ ನಾವು ನಿರ್ಧಾರ ಕೈಗೊಂಡಿಲ್ಲ
ಪೂರ್ಣ ಆದೇಶ ಸಿಕ್ಕಿದ ಮೇಲೆ ವಕೀಲರ ಜೊತೆ ಚರ್ಚಿಸಿ ತೀರ್ಮಾನ
ನಾವು ರಚನೆ ಮಾಡಿರುವ ವಿಶೇಷ ತನಿಖಾ ತಂಡ ಕೂಡಾ ತನಿಖೆ ಮಾಡುತ್ತೆ
ನಾನು ಕೇರಳಕ್ಕೆ ಹೋಗುತ್ತಿದ್ದೇನೆ, ನಾಳೆ ಬೆಳಗ್ಗೆ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ

Share Post