CrimeNational

ದೇಗುಲದಲ್ಲಿ ಕುಡುಕನ ಕಿತಾಪತಿ!; ಪೊಲೀಸ್‌ ದಂಪತಿ ಮೇಲೆ ಹಲ್ಲೆ, ಬೈಕ್‌ಗೆ ಬೆಂಕಿ!

ಭೋಪಾಲ್​; ದೇವಸ್ಥಾನವೊಂದರಲ್ಲಿ ಕುಡುಕನೊಬ್ಬ ಪೊಲೀಸ್‌ ಕಾನ್ಸ್‌ಟೇಬಲ್‌ ಹಾಗೂ ಆತನ ಪತ್ನಿ ಜೊತೆ ಕಿರಿಕ್‌ ಮಾಡಿಕೊಂಡಿದ್ದಾರೆ.. ಇಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಅನುಚಿತವಾಗಿಯೂ ವರ್ತನೆ ಮಾಡಿದ್ದಾನೆ.. ಈ ಜಗಳ ತಾರಕಕ್ಕೇರಿ ಕುಡುಕ ಮಹಾಶಯ ಪೊಲೀಸ್‌ ಕಾನ್ಸ್‌ಟೇಬಲ್‌ನ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿದೆ..

ಇದನ್ನೂ ಓದಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌-2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ

ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಹಿಲ್ಸ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣದ ನಡೆದಿದೆ.. ಇಲ್ಲಿನ ಕಮಲಾನಗರದಲ್ಲಿ ನವಗ್ರಹ ದೇವಸ್ಥಾನ ಇದೆ.. ದೇವಸ್ಥಾನಕ್ಕೆ ಪೊಲೀಸ್‌ ಕಾನ್ಸ್‌ಟೇಬಲ್ ಧರ್ಮೇಂದ್ರ ಶರ್ಮಾ ಹಾಗೂ ಅವರ ಪತ್ನಿ ಹೋಗಿದ್ದರು..‌ ಇದೇ ವೇಳೆ ಕುಡಿದು ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಭಕ್ತರ ಜೊತೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ.. ಈ ವೇಳೆ ಕಾನ್ಸ್‌ಟೇಬಲ್‌ ಧರ್ಮೇಂದ್ರ ಕುಡುಕನನ್ನು ಗದರಿದ್ದಾನೆ.. ಇದಕ್ಕೆ ಕಾನ್ಸ್‌ಟೇಬಲ್‌ ಮೇಲೂ ಆತ ರೇಗಿದ್ದಾನೆ.. ಅವರ ಪತ್ನಿ ಮೇಲೂ ಗಲಾಟೆಗೆ ಬಂದಿದ್ದಾನೆ.. ಹಲ್ಲೆಗೂ ಯತ್ನಿಸಿದ್ದಾನೆ..

ಇದನ್ನೂ ಓದಿ; ಚೀನಾ ಕಾರುಗಳ ʻಬೇಬಿ ಬಂಪ್‌ʼ ಸಖತ್‌ ವೈರಲ್‌!; ಗರ್ಭಿಣಿಯಾಗುತ್ತಿವೆ ಕಾರುಗಳು!

ನಂತರ ದೇವಸ್ಥಾನದಿಂದ ಹೊರನಡೆದ ಕುಡುಕ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಸೇರಿದ ಬೈಕ್‌ಗೆ ಬೆಂಕಿ ಹಚ್ಚಿದ್ದಾನೆ.. ನಂತರ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..

Share Post