BengaluruCrime

18 ಮನೆ ಕಳವು ಮಾಡಿದ್ದ ಕೆಜಿಎಫ್‌ ಗ್ಯಾಂಗ್‌ ಅಂದರ್‌!

ಬೆಂಗಳೂರು; ವರ ಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ದೇವರ ಮುಂದಿಡಲು ತೆಗೆದಿರಿಸಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಗ್ಯಾಂಗ್‌ ಅನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.. ಕೆಜಿಎಫ್‌ ಮೂಲದ ಜ್ಞಾನಪ್ರಕಾಶ್‌, ಪ್ರೇಮ ಕುಮಾರ್‌, ಸಂತೋಷ್‌ ಹಾಗೂ ಶಿವಕುಮಾರ್‌ ಬಂಧಿತ ಆರೋಪಿಗಳಾಗಿದ್ದಾರೆ.. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ; ಐಫೋನ್‌ ತಯಾರಿಕಾ ಸಂಸ್ಥೆ ಅಧ್ಯಕ್ಷ ರಾಜ್ಯಕ್ಕೆ; ಲಕ್ಷ ಉದ್ಯೋಗ ಸೃಷ್ಟಿ!

ಮಹದೇವಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.. ಮನೆಯ ಬಳಿ ಚಪ್ಪಲಿ ಇಲ್ಲದಿದ್ದರೆ, ಲೈಟ್‌ ಆಫ್‌ ಆಗಿದ್ದರೆ, ನ್ಯೂಸ್‌ ಪೇಪರ್‌ ಹಾಗೆಯೇ ಬಿದ್ದಿದ್ದರೆ ಮನೆಯಲ್ಲಿ ಯಾರೂ ಇಲ್ಲ ಎಂದು ಖಾತ್ರೆಯಾಗುತ್ತಿತ್ತು.. ಅನಂತಹ ಮನೆಗಳನ್ನು ನೋಡಿಕೊಂಡು ರಾತ್ರಿ ವೇಳೆ ಬೀಗ ಮುರಿದು ಒಳನುಗ್ಗಿ ಕಳ್ಳತನ ಮಾಡಲಾಗುತ್ತಿತ್ತು.. ಮಹಾದೇವಪುರ ಠಾಣಾ ವ್ಯಾಪ್ತಿಯಲ್ಲಿ 6 ಮನೆಗಳಲ್ಲಿ ಕಳ್ಳತನ ಮಾಡಿದ್ದರು.

ಇದನ್ನೂ ಓದಿ; ಆ.17ಕ್ಕೆ ಭೂಮಿಗೆ ಅಪ್ಪಳಿಸುತ್ತಾ ಕ್ಷುದ್ರಗ್ರಹ..?; ತಡೆಯೋ ಪ್ರಯತ್ನ ಯಾಕಿಲ್ಲ..?

ಮಹದೇವಪುರ ಪೊಲೀಸರು ಬಂಧಿತರಿಂದ 75 ಲಕ್ಷ ರೂಪಾಯಿ ಮೌಲ್ಯದ 840 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದುವರೆಗೆ ಈ ಕಳ್ಳರು 18 ಮನೆ ಕಳ್ಳತನ ಮಾಡಿದ್ದರು ಎಂದು ತಿಳಿದುಬಂದಿದೆ..

Share Post