CrimeDistricts

ನೂರು ಬಸ್‌ಗಳ ಮಾಲೀಕ ಪ್ರಕಾಶ್‌ ನೇಣಿಗೆ ಶರಣು

ಮಂಗಳೂರು; ಕರಾವಳಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದ ಬಸ್‌ ಟ್ರಾವೆಲ್ಸ್‌ ಮಾಲೀಕ ಪ್ರಕಾಶ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಹೇಶ್‌ ಟ್ರಾವೆಲ್ಸ್‌ ಹೆಸರಿನ ಬಸ್‌ಗಳು ಹೆಚ್ಚಾಗಿ ಓಡಾಡುತ್ತಿದ್ದವು. ಈ ಟ್ರಾವೆಲ್ಸ್‌ ಈ ಭಾಗದಲ್ಲಿ ಅತಿ ಹೆಚ್ಚು ಹೆಸರು ಮಾಡಿತ್ತು.

ಆದ್ರೆ ಅದೇನಾಯ್ತೋ ಏನು ಕಳೆದ ರಾತ್ರಿ ಮಹೇಶ್‌ ಟ್ರಾವೆಲ್ಸ್‌ ಮಾಲೀಕ ಪ್ರಕಾಶ್‌, ಕದ್ರಿ ಕಂಬಳ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕಾಶ್‌ ಅವರು ಹಲವರು ರೂಟ್‌ಗಳಲ್ಲಿ ಬಸ್‌ಗಳನ್ನು ಓಡಿಸುತ್ತಿದ್ದರು. ಜೊತೆಗೆ ಟೂರಿಸ್ಟ್‌, ಲಾರಿ ಉದ್ಯಮದಲ್ಲಿಒ ಕೂಡಾ ಸಾಕಷ್ಟು ಹೆಸರು ಮಾಡಿದ್ದರು.

 

Share Post