CrimeNational

ತಿರುಪತಿಗೆ ಹೋಗುತ್ತಿದ್ದ ರೈಲಿಗೆ ಬೆಂಕಿ; 3 ಬೋಗಿಗಳು ಸುಟ್ಟು ಭಸ್ಮ!

ವಿಶಾಖಪಟ್ಟಣಂ; ತಿರುಪತಿಗೆ ಹೊರಟಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಆತಂಕಕ್ಕೆ ಕಾರಣವಾಗಿತ್ತು.. ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ಈ ದುರ್ಘಟನೆ ನಡೆದಿದೆ.. ರೈಲು ನಿಂತಿದ್ದಾಗ ಈ ದುರ್ಘಟನೆ ನಡೆದಿದ್ದರಿಂದ ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ..

ಇದನ್ನೂ ಓದಿ; ಬ್ಯಾಂಕ್‌ ಕಳುವಿಗೆ ಯತ್ನಿಸಿ ವಿಫಲವಾದ ಮಹಿಳೆ!

ಮೂರು ಎಸಗಿ ಕೋಚ್‌ಗಳಿಗೆ ಬೆಂಕಿ ತಗುಲಿದೆ.. ಕೋರ್ಬಾ-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್‌ ರೈಲು ಇದಾಗಿದೆ.. ಬೆಳಗ್ಗೆ ಈ ರೈಲು ವಿಶಾಖಪಟ್ಟಣ ತಲುಪಿತ್ತು.. ಅಲ್ಲಿಂದ ಅದು ತಿರುಪತಿ ಕಡೆಗೆ ಹೊರಡಬೇಕಿತ್ತು.. ಈ ವೇಳೆ ಎರಡು ಬೋಗಿಗಳಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ.. ಪರೀಕ್ಷೆ ಮಾಡುವಷ್ಟರಲ್ಲಿ ಬೆಂಕಿ ಮೂರು ಬೋಗಿಗಳಿಗೆ ಆವರಿಸಿದೆ.. ಮೂರೂ ಬೋಗಿಗಳೂ ಸುಟ್ಟು ಭಸ್ಮವಾಗಿವೆ ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಸಿದ್ದರಾಮಯ್ಯ ಅವರೇ ಇನ್ನು 10 ತಿಂಗಳ ಸಿಎಂ ಆಗಿರಿ ನೋಡೋಣ; ಕುಮಾರಸ್ವಾಮಿ ಸವಾಲು!

 

Share Post