BengaluruPolitics

ಸಿದ್ದರಾಮಯ್ಯ ಅವರೇ ಇನ್ನು 10 ತಿಂಗಳ ಸಿಎಂ ಆಗಿರಿ ನೋಡೋಣ; ಕುಮಾರಸ್ವಾಮಿ ಸವಾಲು!

ಬೆಂಗಳೂರು; ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿ ಆಗಿರುವ ಹಗರಣದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್‌ ಪಾದಯಾತ್ರೆ ಶುರು ಮಾಡಿದೆ.. ಬೆಂಗಳೂರಿನಿಂದ ಮೈಸೂರಿನವರೆಗೆ ನಡೆಸುವ ಈ ಪಾದಯಾತ್ರೆಗೆ ಇಂದು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಚಾಲನೆ ಕೊಟ್ಟಿದ್ದಾರೆ..
ಇದೇ ವೇಳೆ ಮಾತನಾಡಿರುವ ಕೇಂದ್ರ ಸಚಿವ ಕುಮಾರಸ್ವಾಮಿಯವರು, ಸಿದ್ದರಾಮಯ್ಯ ಅವರೇ ಹತ್ತು ವರ್ಷ ನಾನೇ ಸಿಎಂ ಎಂದು ಹೇಳುತ್ತೀರಲ್ಲ. ಈಗ ಮುಂದಿನ 10 ತಿಂಗಳು ಸಿಎಂ ಆಗಿ ಮುಂದುವರೆಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ.. ನಮ್ಮ ತಂದೆಯವರನ್ನು ಪ್ರಧಾನಿ ಮಾಡಿದ್ದು ನೀವಲ್ಲ. ಹಾಗಾದ್ರೆ ಅವರನ್ನು ಕೆಳಗಿಳಿಸಿದ್ದು ಯಾಕೆ ಎಂದು ಇದೇ ವೇಳೆ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ..
ಡಿ.ಕೆ.ಶಿವಕುಮಾರ್‌ ಅವರು ಕೇಂದ್ರ ಸರ್ಕಾರಕ್ಕೆ ನಾನು ದಾಖಲೆಗಳನ್ನು ಕೊಟ್ಟಿದ್ದೇನೆ ಎಂದಿದ್ದಾರೆ. ಜೈಲಿಗೆ ಹೋಗಲು ಸಿದ್ಧ ಎಂದೆಲ್ಲಾ ಹೇಳಿದ್ದಾರೆ.. ನಾನು ಕನಕಪುರ ಹಾಗೂ ರಾಮನಗರದಲ್ಲೇ ಈ ಬಗ್ಗೆ ಉತ್ತರ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು..

Share Post