CrimeNational

ಕಿರಿಯ ವಿದ್ಯಾರ್ಥಿಗಳನ್ನು ಕೂಡಿಹಾಕಿ ದೊಣ್ಣೆಗಳಿಂದ ತೀವ್ರ ಹಲ್ಲೆ!

ನರಸಾರಾವ್ ಪೇಟ; ಆಂಧ್ರಪ್ರದೇಶದ ನರಸಾರಾವ್‌ ಪೇಟದಲ್ಲಿ ದಾರುಣವೊಂದು ನಡೆದಿದೆ.. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ದೊಣ್ಣೆಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.. ಹಾಸ್ಟೆಲ್‌ಗೆ ಕರೆದುಕೊಂಡು ಹೋಗಿ ಕಿರಿಯ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಲಾಗಿದ್ದು, ಅದರ ವಿಡಿಯೋ ಕೂಡಾ ಮಾಡಲಾಗಿದೆ.. ಆ ವಿಡಿಯೋ ಈಗ ಎಲ್ಲಡೆ ವೈರಲ್‌ ಆಗುತ್ತಿವೆ.. ಇದು ಫೆಬ್ರವರಿಯಲ್ಲಿ ನಡೆದ ಘಟನೆಯಾಗಿದ್ದು, ಈಗ ವಿಡಿಯೋ ವೈರಲ್‌ ಆಗಿದ್ದರಿಂದ ಚರ್ಚೆ ಹುಟ್ಟು ಹಾಕಿದೆ..

ಇದನ್ನೂ ಓದಿ; ಜೈಲಿನಲ್ಲಿ ಮೊಬೈಲ್‌ಗಳು, ಗಾಂಜಾ, ಡ್ರಗ್ಸ್‌ ಪತ್ತೆ..!; ಈ ಜೈಲಲ್ಲಿ ಬೇಕಾದ್ದು ಸಿಗುತ್ತೆ..!

ನರಸರಾವ್‌ಪೇಟೆಯ ಶ್ರೀ ಸುಬ್ಬರಾಯ ಮತ್ತು ನಾರಾಯಣ ಕಾಲೇಜಿನ ಹಾಸ್ಟೆಲ್‌ನಲ್ಲಿ ಈ ವಿಡಿಯೋ ತೆಗೆಯಲಾಗಿದೆ ಎಂದು ಹೇಳಲಾಗಿದೆ.. ಎನ್‌ಸಿಸಿ ತರಬೇತಿ ಹೆಸರಲ್ಲಿ ಕಿರಿಯ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ಗೆ ಕರೆದುಕೊಂಡು ಹೋಗಿರುವ ಹಿರಿಯ ವಿದ್ಯಾರ್ಥಿಗಳು ಕೊಠಡಿಯೊಂದರಲ್ಲಿ ಕೂಡಿಹಾಕಿ ಥಳಿಸಿದ್ದಾರೆ… ಅದಕ್ಕಾಗಿ ದೊಣ್ಣೆಗಳನ್ನು ಬಳಸಿದ್ದಾರೆ.. ಕಿರಿಯ ವಿದ್ಯಾರ್ಥಿಯನ್ನು ಒಬ್ಬೊಬ್ಬರನ್ನಾಗಿ ಕೊಠಡಿಗೆ ಕರೆತರುತ್ತಿರುವ ವಿಡಿಯೋ ರೆಕಾರ್ಡ್‌ ಆಗಿದ್ದು, ಅದು ಈ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; ಲವಂಗ ಸೇವನೆಯಿಂದ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆಯಂತೆ!

ಪೊಲೀಸರು ಇದು ಫೆಬ್ರವರಿ 2 ರಂದು ನಡೆಯ ಘಟನೆಯಾಗಿದ್ದು, ಆರೋಪಿ ವಿದ್ಯಾರ್ಥಿಗಳು ಪಾಸ್‌ ಆಗಿ ಹೋಗಿದ್ದಾರೆ.. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ..

 

Share Post