NationalPolitics

ಕಾಂಗ್ರೆಸ್‌ ಮಾಜಿ ಶಾಸಕ ಆತ್ಮಹತ್ಯೆ; ಆಸ್ಪತ್ರೆಯಲ್ಲಿ ತಂದೆಯ ನರಳಾಟ!

ರಾಜಸ್ಥಾನ; ತಮಿಳುನಾಡಿನಲ್ಲಿ ಸಂಸದರೊಬ್ಬರು ಟಿಕೆಟ್‌ ಸಿಗದಿದ್ದಕ್ಕಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು.. ಇದೀಗ ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮಾಜಿ ಶಾಸಕರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಆತ್ಮಹತ್ಯೆಗೆ ಕಾರಣ ಏನು ಅನ್ನೋದು ಗೊತ್ತಿಲ್ಲ. ಆದ್ರೆ ಮಾಜಿ ಶಾಸಕ ಹಾಗೂ ಅವರ ತಂದೆ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.. ಇದರಲ್ಲಿ ಮಾಜಿ ಶಾಸಕ ಸಾವನ್ನಪ್ಪಿದ್ದರೆ, ತಂದೆಯ ಸ್ಥಿತಿ ಚಿಂತಾಜನಕವಾಗಿದೆ..

ಇದನ್ನೂ ಓದಿ; ಮದುವೆ ವರನ ಕಾರಿಗೆ ಚಿಪ್ಸ್‌ ಪಾಕೆಟ್‌ಗಳ ಸಿಂಗಾರ; ಏನಿದು ವಿಚಿತ್ರ..?

ಮಾಜಿ ಶಾಸಕ ವಿವೇಕ್‌ ಆತ್ಮಹತ್ಯೆ;

ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಮಂಡಲಗಢ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ನ ಮಾಜಿ​ ಶಾಸಕ ವಿವೇಕ್ ಧಾಕಡ್ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.. ಮಂಡಲಗಢದ ಸುಭಾಷ್‌ ನಗರದ ಮನೆಯಲ್ಲಿ ವಿವೇಕ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಇದನ್ನು ನೋಡಿದ ಅವರ ತಂದೆ ಕೂಡಾ ವಿಷ ಸೇವಿಸಿದ್ದಾರೆ.. ವಿವೇಕ್‌ ಅವರ ತಂದೆಯವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.. ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.. ಘಟನೆ ಕುರಿತು ಮಾಹಿತಿ ಸಿಕ್ಕ ಕೂಡಲೇ ಸುಭಾಷ್​ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ; ಡಾ.ಕೆ.ಸುಧಾಕರ್‌ ಭರ್ಜರಿ ತಂತ್ರಗಾರಿಕೆ; ಮಾಜಿ ಸಚಿವ ಗೆಲ್ಲೋದು ಫಿಕ್ಸ್‌..?

ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ;

ಮಾಜಿ ಶಾಸಕ ವಿವೇಕ್‌ ಅವರು ಕೈನ ನರವನ್ನು ಕತ್ತರಿಸಿಕೊಂಡಿದ್ದರು.. ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದರು.. ಕೂಡಲೇ ಕುಟುಂಬದವರು ಅವರನ್ನು ಮಹಾತ್ಮಾಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದರು.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ವಿವೇಕ್‌ ಅವರು ಸಾವನ್ನಪ್ಪಿದ್ದಾರೆ.. ಅವರ ತಂದೆ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ..

ಇದನ್ನೂ ಓದಿ; ರಶ್ಮಿಕಾಗಾಗಿ ಅಬುದಾಬಿಗೆ ಹೊರಟರಾ ನಟ ವಿಜಯ್‌ ದೇವರಕೊಂಡ..?

ಕುಟುಂಬ ಕಲಹವೇ ಇದಕ್ಕೆ ಕಾರಣವಾ..?;

ಕುಟುಂಬ ಕಲಹವೇ ಈ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.. ವಿವೇಕ್‌ ಅವರು 2013ರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿ ಗೆದ್ದಿದ್ದರು.. ವಿವೇಕ್ ಧಾಕಡ್ ಅವರು ಮಂಡಲಗಢ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸ್ಪರ್ಧೆ ಮಾಡಿದ್ದರು.. ಆದ್ರೆ ಉಪಚುನಾವಣೆಯಲ್ಲಿ ಮಾತ್ರ ಗೆದ್ದಿದ್ದರು.. ಕೀರ್ತಿ ಬೈಸಾ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು.. 9 ತಿಂಗಳ ಕಾಲ ಮಾತ್ರ ಅವರು ಶಾಸಕರಾಗಿದ್ದರು ಎಂದು ತಿಳಿದುಬಂದಿದೆ..

ಇದನ್ನೂ ಓದಿ; ಲಕ್ಷ್ಮಣ ಸವದಿ ಆಪ್ತನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ!

 

Share Post