Uncategorized

ಶಾಲಾ ಬಸ್‌ ಓಡಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ; ಸ್ಥಳದಲ್ಲೇ ಸಾವು!

ಚೆನ್ನೈ; ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶಾಲಾ ವಾಹನದ ಚಾಲಕನಿಗೆ ಹೃದಯಾಘಾತವಾಗಿದ್ದು, ಕೂತಿದ್ದಲ್ಲೇ ಸಾವನ್ನಪ್ಪಿದ್ದಾನೆ.. ತಮಿಳುನಾಡಿನ ಅಯ್ಯನೂರಿನಲ್ಲಿ ಈ ದುರ್ಘಟನೆ ನಡೆದಿದೆ..

ಇದನ್ನೂ ಓದಿ; ನಾಯಿ ಮಾಂಸ ಸಾಗಾಟ ಆರೋಪ ಮಾಡಿ ಪ್ರೊಟೆಸ್ಟ್;‌ ಪುನೀತ್‌ ಕೆರೆಹಳ್ಳಿ ಅಸ್ವಸ್ಥ!

ವೆಲ್ಲಕೋಯಿಲ್​ ಕೆಸಿಪಿ ನಗರದ ವಾಸಿ 49 ವರ್ಷದ ಸೋಮಲಯ್ಯಪ್ಪನ್‌ ಎಂಬ ಚಾಲಕನೇ ಹೃದಯಾಘಾತಕ್ಕೆ ಬಲಿಯಾದ ವ್ಯಕ್ತಿಯಾಗಿದ್ದಾರೆ.. ಇವರು ಅಯ್ಯನೂರಿನ ಖಾಸಗಿ ಶಾಲೆಯ ಬಸ್‌ ಚಾಲಕರಾಗಿದ್ದರೆ, ಅವರ ಪತ್ನಿ ಲತಾ ಅವರು ಅದೇ ಬಸ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಾರೆ..

ಇದನ್ನೂ ಓದಿ; ಸ್ಕೂಟಿಯಲ್ಲಿ ಹೋಗುವಾಗ ಕೇಳಿಸಿತು ಬುಸ್‌ ಬುಸ್‌ ಶಬ್ದ!; ಡಿಕ್ಕಿಯಲ್ಲಿತ್ತು ಹಾವಿನ ಮೊಟ್ಟೆಗಳು!

ಇಂದು ಬೆಳಗ್ಗೆ ಶಾಲೆಗೆ ಮಕ್ಕಳನ್ನು ಕರೆತರುತ್ತಿದ್ದರು. ಈ ವೇಳೆ ಬಸ್‌ ಚಾಲನೆ ಮಾಡುತ್ತಿದ್ದಾಗಲೇ ಸೋಮಲಯ್ಯಪ್ಪನ್‌ ಅವರಿಗೆ ಹೃದಯಾಘಾತವಾಗಿದೆ.. ಕೂಡಲೇ ಅವರು ಬಸ್‌ ಅನ್ನು ಪಕ್ಕಕ್ಕೆ ನಿಲ್ಲಿಸಿದ್ದಾರೆ.. ನಂತರ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾರೆ.. ಸಾಯುವ ಸಮಯದಲ್ಲೂ ಅವರು ಕರ್ತವ್ಯಪ್ರಜ್ಞೆ ಮೆರೆದಿದ್ದರಿಂದ ಶಾಲೆಯಲ್ಲಿದ್ದ 20 ಮಕ್ಕಳ ಪ್ರಾಣ ಉಳಿದಿದೆ.. ತಮಿಳುನಾಡು ಸರ್ಕಾರ ಮೃತ ವ್ಯಕ್ತಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ..

Share Post