BengaluruCrimeUncategorized

ಸಿಲಿಂಡರ್‌ ಬ್ಲಾಸ್ಟ್:ಹೊಟೇಲ್‌ ಮಾಲೀಕನ ಸ್ಥಿತಿ ಗಂಭೀರ

ಬೆಂಗಳೂರು: ಹೊಟೇಲ್‌ವೊಂದರಲ್ಲಿ ಸಿಲಿಂಡರ್‌ ಸ್ಪೋಟಗೊಂಡಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್‌ನಲ್ಲಿ ನಡೆದಿದೆ. ಹೊಟೇಲ್‌ ಮಾಲೀಕ ಮಹೇಶ್‌ಗೆ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಂದ್ರಾಲೇಔಟ್‌ನಲ್ಲಿ ಮಹೇಶ್‌ ಅವರು ಹೊಟೇಲ್‌ ವಿತ್‌  ಪಿಜಿ ನಡೆಸುತ್ತಿದ್ದರಂತೆ. ಕೆಳಗೆ ಅಡುಗೆ ಮಾಡುವ ವೇಳೆ ಬೆಳಗ್ಗೆ 9.45ಕ್ಕೆ ಈ ದುರ್ಘಟನೆ ನಡೆದಿದೆ. ಎನ್ನಲಾಗಿದೆ. ಅದೃಷ್ಟವಶಾತ್‌ ಘಟನೆ ನಡೆದಾಗ ಅವರೊಂದಿಗೆ ಯಾರೂ ಇರಲಿಲ್ಲ. ಹಾಗಾಗಿ ದೊಡ್ಡ ದುರಂತ ತಪ್ಪಿದೆ. ಆದ್ರೆ ಮಹೇಶ್‌ ಅವರ ಪರಿಸ್ಥಿತಿ ಮಾತ್ರ ಗಂಭಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಘಟನೆ ಸಂಬಂಧ ಚಂದ್ರಾಲೇಔಟ್‌ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share Post