CrimeDistrictsUncategorized

ಅನಾರೋಗ್ಯದಿಂದ ಹಾಸಿಗೆ ಹಿಡಿದ ತಾಯಿ; ಎಳನೀರು ಕೀಳಲು ಹೋಗಿ ಮಗ ಸಾವು!

ಮೈಸೂರು; ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಳು.. ಹೀಗಾಗಿ ತಾಯಿಗೆ ಎಳನೀರು ಕೀಳು ಜಮೀನಿನಲ್ಲಿದ್ದ ಮರ ಹತ್ತಿದ್ದ ಮಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.. ಇಂತಹದ್ದೊಂದು ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ..

ಮೈಸೂರು ಜಿಲ್ಲೆ ಕೆಆರ್‌ ನಗರದ ಮುಂಜನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, 27 ವರ್ಷದ ಚೇತನ್‌ ಎಂಬಾತನ ಸಾವನ್ನಪ್ಪಿದ್ದಾನೆ.. ಚೇತನ್‌ ತಾಯಿ ಒಂದೆರಡು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.. ಹೀಗಾಗಿ, ಚೇತನ್‌ ತನ್ನ ತಾಯಿಗಾಗಿ ಎಳನೀರು ಕೀಳಲು ತೆಂಗಿನ ಮರ ಹತ್ತಿದ್ದ..

ಎಳನೀರು ಕೀಳುವ ವೇಳೆ ಆತ ಜಾರಿ ಕೆಳಗೆ ಬಿದ್ದಿದ್ದಾನೆ.. ಇದರಿಂದಾಗಿ ಚೇತನ್‌ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.. ಈ ಬಗ್ಗೆ ಕೆಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

 

Share Post