CrimeDistrictsUncategorized

ಹಳೆ ಬಾಕಿ ತೀರಿಸದಿದ್ದಕ್ಕೆ ಸಿಗಲಿಲ್ಲ ರಸಗೊಬ್ಬರ; ರೈತ ಆತ್ಮಹತ್ಯೆ

ಕೊಪ್ಪಳ; ಹಳೇ ಬಾಕಿ ತೀರಿಸದಿದ್ದಕ್ಕೆ ಈಗ ರಸಗೊಬ್ಬರ ಕೊಟ್ಟಿಲ್ಲ ಅಂತ ಮನನೊಂದು ರೈತ ಮನನೊಂದು ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಕೊಪ್ಪಳ ನಗರದ ಗಂಜ್‌ನಲ್ಲಿರುವ ಅಂಗಡಿಯಲ್ಲಿ ನಡೆದಿದೆ.

  ಹನಕಟಿ ಗ್ರಾಮದ ರೈತ ರವಿ ಲಕ್ಕುಂಡಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವರು. ರವಿ ಲಕ್ಕುಂಡಿ  ಮೆಕ್ಕೆಜೋಳದ ಬೀಜ ಹಾಗೂ ಗೊಬ್ಬರವನ್ನು ರಸಗೊಬ್ಬರ ಅಂಗಡಿಯಲ್ಲಿ ಸಾಲವಾಗಿ ಪಡೆದುಕೊಂಡಿದ್ದರು. ಬೆಳೆ ಬಂದ ಬಳಿಕ ಸ್ವಲ್ಪ ಸಾಲವನ್ನು ಮಾತ್ರ ತೀರಿಸಿದ್ದರು. ಆದ್ರೆ ಇನ್ನೂ ಬಾಕಿ ಉಳಿದಿತ್ತು. ಹೀಗಾಗಿ ಗೊಬ್ಬರದ ಅಂಗಡಿಯವ ಈ ಬಾರಿ ಸಾಲ ಕೊಟ್ಟಿಲ್ಲ.

ಇದರಿಂದ ನೊಂದ ರೈತ ರಸಗೊಬ್ಬರದ ಅಂಗಡಿ ಬಳಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಕ್ರಿಮಿನಾಶಕ ಸೇವಿಸಿದ್ದ ರೈತನನ್ನು ಆ ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ.

Share Post