DistrictsSports

ಯುವರಾಜ್‌ ಸಿಂಗ್‌ ತಂಡದ ವಿರುದ್ಧ ಸಚಿನ್‌ ತಂಡಕ್ಕೆ ಜಯ

ಚಿಕ್ಕಬಳ್ಳಾಪುರ; ಇಲ್ಲಿ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಾಯಿಕೃಷ್ಣ ಕ್ರೀಡಾಂಗಣ ಇಂದು ಲೋಕಾರ್ಪಣೆಯಾಯಿತು. ಈ ಹಿನ್ನೆಲೆಯಲ್ಲಿ ಇಂದು ಸಚಿನ್‌ ತೆಂಡೂಲ್ಕರ್‌ ಹಾಗೂ ಯುವರಾಜ್‌ ಸಿಂಗ್‌ ತಂಡಗಳ ನಡುವೆ ಟಿ-೨೦ ಪಂದ್ಯ ನಡೆಯಿತು. ಇದರಲ್ಲಿ ಸಚಿನ್‌ ತೆಂಡೂಲ್ಕರ್‌ ನೇತೃತ್ವದ ತಂಡ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಯುವರಾಜ್‌ ಸಿಂಗ್‌ ನೇತೃತ್ವದ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 180 ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನತ್ತಿದ ಸಚಿನ್‌ ತೆಂಡೂಲ್ಕರ್‌ ತಂಡ ಇನ್ನೂ ಒಂದು ಎಸೆತ ಉಳಿದಿರುವಾಗ ಜಯಶಾಲಿಯಾಯಿತು.

 

Share Post