NationalPolitics

ಮತ್ತೆ NDA ತೊರೆಯುತ್ತಾರಾ ನಿತೀಶ್ ಕುಮಾರ್?

ಬಿಹಾರ; ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೆ ಮೋದಿಗೆ ಕೈಕೊಡ್ತಾರಾ..? ಇಂತಹದೊಂದು ಅನುಮಾನ ಶುರುವಾಗಿದೆ.. ನಿತೀಶ್ ಕುಮಾರ್ NDA ಸಖ್ಯ ತೊರೆದು ಮತ್ತೆ ಘಟಬಂಧನ್ ಸೇರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ..

 ನಿತೀಶ್ ಕುಮಾರ್ ಅವರು ಒಂದು ಕಡೆ ನಿಲ್ಲೋದಿಲ್ಲ.. ಜಂಪ್ ಆಗುತ್ತಲೇ ಇರುತ್ತಾರೆ.. ಕೇಂದ್ರದಲ್ಲಿ ಮೋದಿ ಸರ್ಕಾರ ಬರಲು ನಿತೀಶ್ ಬೆಂಬಲ ಕಾರಣ.. ಆದ್ರೆ ಅವರು ಈಗ ಮತ್ತೆ ಘಟಬಂಧನ್ ಸೇರಲಿದ್ದಾರೆ ಎಂದು ಹೇಳಲಾಗ್ತಿದೆ.

ಇತ್ತೀಚೆಗೆ ಮಾಹಿತಿ ಆಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿ ನಡೆದಿತ್ತು.. ಈ ವೇಳೆ ಮಾತನಾಡಿದ್ದ rjd ನಾಯಕ ಭಾಯಿ ವೀರೇಂದ್ರ ಅವರು, ನಿತೀಶ್ ಮತ್ತೆ ಘಟಬಂಧನ್ ಗೆ ಮರುಳುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಬಗ್ಗೆ ಕುತೂಹಲ ಕೆರಳಿಸಿದೆ.

  ಆದ್ರೆ ನಿತೀಶ್ ಪಕ್ಷ ಇದನ್ನು ಅಲ್ಲಗಳೆದಿದೆ.

 

Share Post