Politics

ರೇಪ್‌ ಮಾಡಿ ಓಡಿಹೋಗಿದ್ದಕ್ಕೂ, ನನ್ನ ಮಗನ ಸಾವಿಗೂ ಏನು ಸಂಬಂಧ?; ಸಿದ್ದರಾಮಯ್ಯ

ಮೈಸೂರು; ನನ್ನ ಮಗ ರಾಕೇಶ್‌ ಸಾವನ್ನಪ್ಪಿ 8 ವರ್ಷಗಳೇ ಕಳೆದುಹೋಗಿವೆ.. ಈಗ ಅದನ್ನು ಯಾವುದಕ್ಕೋ ಲಿಂಕ್‌ ಮಾಡುವುದು ಮೂರ್ಖತನ ಎಂದು ಸಿಎಂ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ… ಮೈಸೂರಿನಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯ ಅವರು ಸಾಯುವುದಕ್ಕಾಗಿ ಮಗನನ್ನು ವಿದೇಶಕ್ಕೆ ಕಳುಹಿಸಿದ್ದರಾ..? ಎಂಬ ಕುಮಾರಸ್ವಾಮಿ ಪ್ರಶ್ನೆಗೆ ತೀಕ್ಷ್ಮವಾಗಿ ಉತ್ತರ ಕೊಟ್ಟಿದ್ದಾರೆ.

ಕುಮಾರಸ್ವಾಮಿಯವರ ಅಣ್ಣನ ಮಗ ರೇಪ್‌ ಮಾಡಿ ವಿದೇಶಕ್ಕೆ ಓಡಿಹೋಗಿದ್ದಾನೆ.. ಅದಕ್ಕೂ 2016ರಲ್ಲಿ ಸತ್ತು ಹೋದ ರಾಕೇಶ್‌ ಗೂ ಪ್ರಕರಣಕ್ಕೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.. ಅತ್ಯಾಚಾರಕ್ಕಿಂತ ವಿಡಿಯೋನ ಹಂಚಿದ್ದು ದೊಡ್ಡ ಅಪರಾಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ರೇಪ್‌ಗಿಂತ ವಿಡಿಯೋ ಹಂಚಿದ್ದು ದೊಡ್ಡ ಅಪರಾಧ ಅಂತ ಯಾವ ಕಾನೂನುನಿಲ್ಲಿದೆ ಹೇಳಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.. ಕುಮಾರಸ್ವಾಮಿ ಏನಾದರೂ ಸೆಕ್ಷನ್ ಹೇಳಿದ್ದರಾ..? ಅದು ಭಾರತೀಯ ದಂಡ ಸಂಹಿತೆಯಲ್ಲಿದೆಯಾ..? ಎಂದೂ ಸಿದ್ದರಾಮಯ್ಯ ಕೇಳಿದ್ದಾರೆ..

 

Share Post