NationalPolitics

ಲೋಕಸಭಾ ಕಲಾಪಕ್ಕೆ ನುಗ್ಗಿದ ಇಬ್ಬರು!; ಪ್ರತಾಪ ಸಿಂಹ ಕಚೇರಿಯಿಂದ ಪಾಸ್‌ ವಿತರಣೆ!

ನವದೆಹಲಿ; ಇಂದಿಗೆ ಸಂಶತ್‌ ಮೇಲೆ ಉಗ್ರರ ದಾಳಿ ನಡೆದು 22 ವರ್ಷ. ಇದೇ ದಿನ ಸಂಸತ್‌ ಕಲಾಪದಲ್ಲಿ ದುರ್ಘಟನೆಯೊಂದು ನಡೆದಿದೆ. ಇಬ್ಬರು ವ್ಯಕ್ತಿಗಳು ಅನಧಿಕೃತವಾಗಿ ಲೋಕಸಭೆಯನ್ನು ಪ್ರವೇಶ ಮಾಡಿದ್ದಾರೆ. ಎರಡು ಡಬ್ಬಿಗಳನ್ನು ಹಿಡಿದು ಬಣ್ಣದ ಅಶ್ರುವಾಯುವನ್ನು ಕಲಾಪದಲ್ಲಿ ಪ್ರಯೋಗ ಮಾಡಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ಒಳ ಜಿಗಿದಿರುವ ಇಬ್ಬರು ವ್ಯಕ್ತಿಗಳು ಈ ಕೃತ್ಯ ನಡೆಸಿದ್ದು, ಅವರನ್ನು ಹಿಡಿಯಲಾಗಿದೆ. ಇದರಲ್ಲಿ ಇಬ್ಬ ವ್ಯಕ್ತಿ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಕಚೇರಿಯಿಂದ ಪಡೆದ ಪಾಸ್‌ ಹೊಂದಿದ್ದ ಎಂದು ತಿಳಿದುಬಂದಿದ್ದು, ಈ ಬಗ್ಗೆ ಚರ್ಚೆ ಶುರುವಾಗಿದೆ.

   ಲೋಕಸಭೆ ಪ್ರವೇಶಿಸಿದ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನ ಹೆಸರು ಸಾಗರ್‌ ಎಂದು ತಿಳಿದುಬಂದಿದೆ. ಈತ ಮೈಸೂರಿನ ಸಂಸದರ ಪಾಸ್‌ ಜೊತೆ ಸಂಸತ್‌ ಪ್ರವೇಶಿಸಿದ್ದ ಎಂದು ಸಂಸದ ಡ್ಯಾನಿಶ್‌ ಅಲಿ ಹೇಳಿದ್ದಾರೆ. ಇಬ್ಬರೂ ವ್ಯಕ್ತಿಗಳೂ 20 ವರ್ಷ ವಯಸ್ಸಿನ ಯುವಕರಾಗಿದ್ದಾರೆ. ಇವರು ಇದ್ದಕ್ಕಿದ್ದಂತೆ ಸಂದರ್ಶಕರ ಗ್ಯಾಲರಿಯಿಂದ ಕಲಾಪಕ್ಕೆ ಜಿಗಿದಿದ್ದಾರೆ. ಅವರ ಕೈಯಲ್ಲಿ ಡಬ್ಬಿಗಳಿದ್ದವು. ಅದರಿಂದ ಹಳದಿ ಹೊಗೆ ಹೊರಬಿಟ್ಟಿದ್ದಾರೆ. ಇಬ್ಬ ವ್ಯಕ್ತಿ ಸ್ಪೀಕರ್‌ ಕುರ್ಚಿಯತ್ತ ಓಡಲು ಪ್ರಯತ್ನ ಮಾಡಿದ್ದಾನೆ. ಇಬ್ಬರನ್ನೂ ಹಿಡಿಯಲಾಗಿದೆ.

Share Post