NationalPolitics

ಎಲ್ಲದಕ್ಕೂ ಕಾಲವೇ ಉತ್ತರಿಸುತ್ತೆ; ಡಿ.ಕೆ.ಶಿವಕುಮಾರ್‌ ಹೀಗಂದಿದ್ದೇಕೆ..?

ನವದೆಹಲಿ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿರುವ ಸಿದ್ದರಾಮಯ್ಯ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇದೇ ವೇಳೆ ದೆಹಲಿ ವಿಮಾನದಲ್ಲಿ ಡಿ.ಕೆ.ಶಿವಕುಮಾರ್‌ ಅವರನ್ನು ಮಾಧ್ಯಮ ಪ್ರತಿನಿಧಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಡಿ.ಕೆ.ಶಿವಕುಮಾರ್‌ ನಗುವೊಂದೇ ಉತ್ತರವಾಗಿತ್ತು.

ಪಕ್ಷ ನಿಮಗೆ ತಾಯಿ ಇದ್ದಂತೆ ಎಂದು ಹೇಳಿದ್ದಿರಿ. ನಮಗೆ ತಾಯಿ ನ್ಯಾಯ ಕೊಟ್ಟರಾ..? ಕೆಲಸ ಮಾಡಿದ್ದೀವಿ, ಕೂಲಿ ಕೇಳ್ತಿದ್ದೀವಿ ಅಂದಿದ್ದರಿ, ಹಾಗಾದ್ರೆ ಕೂಲಿ ಸಿಕ್ತಾ..?, ಅಧಿಕಾರ ಹಂಚಿಕೆ ಬಗ್ಗೆ ನಿಮಗೆ ಭರವಸೆ ಸಿಕ್ಕಿದೆಯಾ..? ಯಾಕೆ ಬೇಜಾರಲ್ಲಿದ್ದೀರಿ..? ಹೀಗೆ ಹಲವು ಪ್ರಶ್ನೆಗಳು ಮಾಧ್ಯಮ ಪ್ರತಿನಿಧಿಗಳು ಕೇಳಿದ್ದಾರೆ.

ಎಲ್ಲವನ್ನೂ ಕೇಳಿಸಿಕೊಂಡ ಡಿ.ಕೆ.ಶಿವಕುಮಾರ್‌ ಅವರು ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತೆ ಎಂದು ಹೇಳಿದ್ದಾರೆ.

Share Post