BengaluruDistrictsPolitics

ನಿಖರವಾದ ಚುನಾವಣಾ ಫಲಿತಾಂಶದ ಭವಿಷ್ಯ ಹೇಳಿ; 10 ಲಕ್ಷ ಪಡೆಯಿರಿ

ಮಂಗಳೂರು; ಪ್ರತಿ ಚುನಾವಣೆ ಬಂದಾಗಲೂ ಮಂಗಳೂರಿನ ವಿಚಾರವಾದಿ ಫ್ರೊಫೆಸರ್‌ ನರೇಂದ್ರ ನಾಯರ್‌ ಅವರು ಜ್ಯೋತಿಷಿಗಳು ಒಂದು ಆಫರ್‌ ಕೊಡುತ್ತಾರೆ. ಚುನಾವಣೆ ಫಲಿತಾಂಶ ನಿಖರವಾಗಿ ಹೇಳಿದರೆ ಅವರಿಗೆ ನಗದು ಬಹುಮಾನ ಕೊಡುತ್ತೇನೆ ಎಂದು. ಆದ್ರೆ ಇದುವರೆಗೆ ಯಾರೂ ನಿಖರವಾಗಿ ಹೇಳಿಲ್ಲ. ಇದುವರೆಗೆ ಯಾರೂ ಬಹುಮಾನವನ್ನೂ ಪಡೆದಿಲ್ಲ. ಹೀಗಾಗಿ ಈ ಬಾರಿಯೂ ನರೇಂದ್ರ ನಾಕ್‌ ಅವರು ಬಂಪರ್‌ ಆಫರ್‌ ಕೊಟ್ಟಿದ್ದಾರೆ.

ಈ ಬಾರಿ ಚುನಾವಣೆಲ್ಲಿ ಯಾರಿಗೆ ಎಷ್ಟು ಸ್ಥಾನ ಬರುತ್ತೆ ಎಂದು ನಿಖರವಾಗಿ ಹೇಳಿದರೆ ಅವರಿಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡೋದಾಗಿ ಘೋಷಿಸಿದ್ದಾರೆ. ಈಗಾಗಲೇ 20ಕ್ಕೂ ಹೆಚ್ಚು ಜ್ಯೋತಿಷಿಗಳು ಅಂಚೆ ಮೂಲಕ ಫಲಿತಾಂಶವನ್ನು ಕಳುಹಿಸಿದ್ದಾರಂತೆ. ನಾಳೆ ಫಲಿತಾಂಶ ಪ್ರಕಟವಾಗಲಿದ್ದು, ಇವತ್ತು ಸಂಜೆಯವರೆಗೆ ಭವಿಷ್ಯ ಕಳುಹಿಸಲು ಅವಕಾಶವಿದೆ.

ಜ್ಯೋತಿಷ್ಯ ಸುಳ್ಳು ಎಂದು ಬಿಂಬಿಸೋದಕ್ಕಾಗಿ ನರೆಂದ್ರ ನಾಯಕ್‌ ಈ ಅಭಿಯಾನ ನಡೆಸುತ್ತಿದ್ದಾರೆ. ಬಂದಿದ್ದಾರೆ. ಆದ್ರೆ ಇದುವರೆಗೆ ಯಾರೂ ನಿಖರ ಉತ್ತರ ಹೇಳಿ ಜ್ಯೋತಿಷಿ ನಿಜ ಅನ್ನೋದನ್ನು ನಿರೂಪಿಸಿಲ್ಲ.

Share Post