Politics

ಕೊವಿಡ್‌ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ; ಸಾವಿರಾರು ಜನ ಸೇರಿಸಿ ಮದುವೆ

ಅಹಮದ್‌ನಗರ: ಮಹಾರಾಷ್ಟ್ರದ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕರೊಬ್ಬರು ಕೊವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ತಮ್ಮ ಮಗನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಮದುವೆ ಸಮಾರಂಭ ನಡೆಸಲಾಗಿದ್ದು, ಈ ಸಮಾರಂಭದಲ್ಲಿ ಸಚಿವರು, ಶಾಸಕರು ಕೂಡಾ ಭಾಗಿಯಾಗಿದ್ದಾರೆ. ಅಷ್ಟೇ ಅಲ್ಲ,  ಪೊಲೀಸ್‌ ಭದ್ರತೆಯಲ್ಲೇ ಈ ಮದುವೆ ನಡೆದಿದೆ.

ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಶಿವಾಜಿ ರಾವ್‌ ಕಾರ್ಡಿಲೆ ಅವರ ಮಗ ಅಕ್ಷಯ್‌ ಕಾರ್ಡಿಲೆ ಅವರ ಮದುವೆ ಸಮಾರಂಭವನ್ನು ನಿನ್ನೆ ಏರ್ಪಡಿಸಲಾಗಿತ್ತು. ಈ ಸಮಾರಂಭದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ. ಇಲ್ಲಿ ಕೊವಿಡ್‌ ನಿಯಮಾವಳಿ ಸ್ಪಷ್ಟ ಉಲ್ಲಂಘನೆಯಾಗಿತ್ತು.  ಆದರೂ ಯಾರೂ ಏನೂ ಕೇಳಲಿಲ್ಲ. ಪೊಲೀಸರೇ ಇದಕ್ಕೆ ಭದ್ರತೆ ಒದಗಿಸಿದ್ದರು ಅನ್ನೋದು ವಿಪರ್ಯಾಸದ ಸಂಗತಿ.

Share Post