Politics

ಕಾಲುವೆಗೆ ಉರುಳಿಬಿದ್ದ ಕಾಂಗ್ರೆಸ್‌ ಮುಖಂಡನಿದ್ದ ಕಾರು; ನಾಲ್ವರಿಗೆ ಗಂಭೀರ ಗಾಯ!

ಕಲಬುರಗಿ; ಕಾಂಗ್ರೆಸ್‌ ಮುಖಂಡ ಹಾಗೂ ಅವರ ಕುಟುಂಬದ ಸದಸ್ಯರಿದ್ದ ಕಾರೊಂದು ಕಾಲುವೆಗೆ ಉರುಳಿಬಿದ್ದ ಘಟನೆ ಕಲಬುರಗಿ ಬಳಿ ನಡೆದಿದೆ.. ನಗರದ ಹೊರವಲಯದ ನಾಗನಹಳ್ಳಿ ರಿಂಗ್‌ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡ ವಿಠಲ್ ಜಾಧವ್, ಪತ್ನಿ ರತ್ನಾಬಾಯಿ, ಪುತ್ರಿ ಸೋನಾಲಿ, ಪುತ್ರ ವಿನೋಧ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ..

ನಾಲ್ವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.. MH- 02, BY- 2230 ನೋಂದಣಿಯ ಚೆವ್ರೋಲೇಟ್ ಸ್ಪಾರ್ಕ್ ಕಾರು ರಾವೂರ್‌ ಗ್ರಾಮದಿಂದ ಕಲಬುರಗಿಗಿಗೆ ತೆರಳುತ್ತಿತ್ತು.. ನಗರಕ್ಕೆ ಹತ್ತಿರವಿರುವಾಗ ಚಾಲಕನ ನಿಯಂತ್ರಣ ತಪ್ಪಿಸಿದ ಕಾರು ಆಳವಾದ ಕಾಲುವೆಗೆ ಉರುಳಿಬಿದ್ದಿದೆ.. ಇದರಿಂದಾಗಿ ಕಾಂಗ್ರೆಸ್‌ ಮುಖಂಡನ ಕುಟುಂಬದ ನಾಲ್ವರೂ ಗಂಭೀರವಾಗಿ ಗಾಯಗೊಂಡಿದ್ದಾರೆ..

 

Share Post