Politics

ನಮ್ಮನ್ನು ಜೈಲಿಗೆ ಹಾಕಿಸಲು ಸಂಚು ನಡೆಯುತ್ತಿದೆ; ಡಿ.ಕೆ.ಶಿವಕುಮಾರ್‌

ರಾಮನಗರ; ನಮ್ಮನ್ನು ಜೈಲಿಗೆ ಹಾಕಿಸಲು ಸಂಚು ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಆರೋಪ ಮಾಡಿದ್ದಾರೆ.. ರಾಮನಗರದಲ್ಲಿ ನಡೆದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏನಾದರೂ ಮಾಡಿ ನಮ್ಮನ್ನು ಜೈಲಿಗೆ ಹಾಕಿಸಬೇಕೆಂದು ಸಂಚು ಮಾಡುತ್ತಿದ್ದಾರೆ. ನಾನು ಜೈಲಿಗೆ ಹೋಗಲೂ ಸಿದ್ಧನಿದ್ದೇನೆ. ನನ್ನಂತಹ ಬೇಕಾದಷ್ಟು ಜನ ಕಾಂಗ್ರೆಸ್‌ನಲ್ಲಿ ಹುಟ್ಟಿಕೊಳ್ಳುತ್ತಾರೆ ಎಂದರು..

ಇದನ್ನೂ ಓದಿ; ರಾಜ್ಯಪಾಲರ ನೋಟಿಸ್‌ಗೆ ಹೆದರಲ್ಲ; ಸಿದ್ದರಾಮಯ್ಯ ಗುಡುಗು

ಬಿಜೆಪಿ ಸರ್ಕಾರದಲಿ ನಡೆದ ಹಗರಣಗಳಿಗೆ ಜವಾಬ್ದಾರಿ ಯಾರು ಎಂದು ಪ್ರಶ್ನೆ ಮಾಡಿದ ಡಿ.ಕೆ.ಶಿವಕುಮಾರ್‌, ವಿಜಯೇಂದ್ರ ವಿರುದ್ಧದ ಎಲ್ಲಾ ರೋಪಗಳನ್ನೂ ಬಿಚ್ಚಿಡುತ್ತೇನೆ ಎಂದು ಗುಡುಗಿದ್ದಾರೆ.. ಭ್ರಷ್ಟಾಚಾರದ ಪಿತಾಮಹ ಅಂದ್ರೆ ಏನು ಅಂತ ವಿಜಯೇಂದ್ರ ಹೇಳಬೇಕು.. ವಿಜಯೇಂದ್ರ ಗಂಡಸಾಗಿದ್ರೆ ಹೇಳಲಿ.. ಯಾವ ಭ್ರಷ್ಟಾಚಾರ ನಡೆದಿದೆ, ಏನು ತನಿಖೆ ಆಗಿದೆ ಅನ್ನೋದು ಹೇಳಲಿ ಎಂದು ಡಿ.ಕೆ.ಶಿವಕುಮಾರ್‌ ಸವಾಲು ಹಾಕಿದ್ದಾರೆ..

ಇದನ್ನೂ ಓದಿ; ಹೈದರಾಬಾದ್‌ ಬಳಿ ಭೀಕರ ಅಪಘಾತ; ಉಂಡೆಯಂತಾಯ್ತು ಕಾರು!

Share Post