Politics

ಲೋಕಸಭಾ ಚುನಾವಣೆ; ರಾಜ್ಯದ 28 ಕ್ಷೇತ್ರಗಳಿಗೆ ಬಿಜೆಪಿ ಸಂಭಾವ್ಯರ ಪಟ್ಟಿ ಸಿದ್ಧ; ಇವರೇನಾ ಅಭ್ಯರ್ಥಿಗಳು..?

ಬೆಂಗಳೂರು; ಲೋಕಸಭಾ ಚುನಾವಣೆ ದಿನಾಂಕ ಇನ್ನೇನು ಕೆಲ ದಿನಗಳಲ್ಲಿ ಘೋಷಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ಸಕಲ ಸಿದ್ಧತೆಗಳು ಕೈಗೊಳ್ಳುತ್ತಿವೆ. ಇತ್ತ ಬಿಜೆಪಿ ಈಗಾಗಲೇ 195 ಕ್ಷೇತ್ರಗಳಿಗೆ ಮೊದಲ ಪಟ್ಟಿ ರಿಲೀಸ್‌ ಕೂಡಾ ಮಾಡಿದೆ. ಆದ್ರೆ ಇದರಲ್ಲಿ ರಾಜ್ಯದ ಒಂದು ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಪ್ರಕಟ ಮಾಡಿರಲಿಲ್ಲ. ಈ ನಡುವೆ ಇಂದು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಸಲಾಗಿದ್ದು, ಸಂಭಾವ್ಯರ ಪಟ್ಟಿ ಸಿದ್ಧ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಾಹಿತಿಗಳ ಪ್ರಕಾರ, ಕ್ಷೇತ್ರಕ್ಕೆ ಇಬ್ಬರು ಮೂವರು ಅಭ್ಯರ್ಥಿಯ ಹೆಸರು ಫೈನಲ್‌ ಮಾಡಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಈ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಹಸ್ತಾಂತರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

28 ಕ್ಷೇತ್ರಗಳಿಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳು;
ಬೀದರ್‌- ಭಗವಂತ ಖೂಬಾ, ಕೇಂದ್ರ ಸಚಿವ, ವೀರಶೈವ ಲಿಂಗಾಯತ
ರಾಯಚೂರು (ಎಸ್‌ಟಿ ಮೀಸಲು)- ಹಾಲಿ ಸಂಸದ ರಾಜಾ ಅಮರೇಶ್ ನಾಯಕ ಅಥವಾ ಶ್ರೀರಾಮುಲು, ವಾಲ್ಮೀಕಿ ಸಮುದಾಯ
ಕಲಬುರಗಿ (ಎಸ್‌ಸಿ ಮೀಸಲು) – ಹಾಲಿ ಸಂಸದ ಉಮೇಶ್ ಜಾಧವ್, ಲಮಾಣಿ
ಕೊಪ್ಪಳ – ಹಾಲಿ ಸಂಸದ ಕರಡಿ ಸಂಗಣ್ಣ, ವೀರಶೈವ ಲಿಂಗಾಯತ
ಬಳ್ಳಾರಿ (ಎಸ್‌ಟಿ ಮೀಸಲು) – ಹಾಲಿ ಸಂಸದ ದೇವೇಂದ್ರಪ್ಪ, ವಾಲ್ಮೀಕಿ ಅಥವಾ ಬಿ.ಶ್ರೀರಾಮುಲು
ಚಿತ್ರದುರ್ಗ(ಎಸ್‌ಸಿ ಮೀಸಲು) – ಕೇಂದ್ರ ಸಚಿವ ಆನೇಕಲ್ ನಾರಾಯಣಸ್ವಾಮಿ ಅಥವಾ ಮಾದಾರ ಚೆನ್ನಯ್ಯ ಶ್ರೀ ಅಥವಾ ರಘು ಚಂದನ್‌
ವಿಜಯಪುರ (ಎಸ್‌ಸಿ ಮೀಸಲು) – ಹಾಲಿ ಸಂಸದ ರಮೇಶ್ ಜಿಗಜಿಣಗಿ ಅಥವಾ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅಥವಾ ಗೋಪಾಲ್‌ ಕಾರಜೋಳ
ಬಾಗಲಕೋಟೆ – ಹಾಲಿ ಸಂಸದ ಪಿ.ಸಿ. ಗದ್ದೀಗೌಡರ್
ಚಿಕ್ಕೋಡಿ – ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅಥವಾ ಮಹಾಂತೇಶ್‌ ಕವಟಗಿಮಠ
ಬೆಳಗಾವಿ – ಹಾಲಿ ಸಂಸದೆ ಮಂಗಳಾ ಸುರೇಶ್ ಅಂಗಡಿ ಅಥವಾ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅಥವಾ ಈರಣ್ಣ ಕದಾಡಿ
ಧಾರವಾಡ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಥವಾ ಜಗದೀಶ್ ಶೆಟ್ಟರ್
ಹಾವೇರಿ-ಗದಗ – ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅಥವಾ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಥವಾ ಕೆ.ಇ.ಕಾಂತೇಶ್‌ ಅಥವಾ ಬಿ.ಸಿ.ಪಾಟೀಲ್‌ ಅಥವಾ ಸಂದೀಪ್‌ ಪಾಟೀಲ್‌
ದಾವಣಗೆರೆ – ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಅಥವಾ ಎಂ.ಪಿ ರೇಣುಕಾಚಾರ್ಯ
ಶಿವಮೊಗ್ಗ – ಹಾಲಿ ಸಂಸದ ಬಿ.ವೈ. ರಾಘವೇಂದ್ರ
ಉತ್ತರ ಕನ್ನಡ – ಹಾಲಿ ಸಂಸದ ಅನಂತ್‌ಕುಮಾರ್ ಹೆಗಡೆ ಅಥೌಆ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಹರಿಪ್ರಕಾಶ್ ಕೋಣೆಮನೆ
ಉಡುಪಿ-ಚಿಕ್ಕಮಗಳೂರು – ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಥವಾ ಡಿ.ಎನ್‌.ಜೀವರಾಜ್‌ ಅಥವಾ ಸಿ.ಟಿ.ರವಿ
ದಕ್ಷಿಣ ಕನ್ನಡ – ಹಾಲಿ ಸಂಸದ ನಳಿನ್‌ಕುಮಾರ್ ಕಟೀಲ್
ಮೈಸೂರು-ಕೊಡಗು – ಹಾಲಿ ಸಂಸದ ಪ್ರತಾಪ್ ಸಿಂಹ
ಚಾಮರಾಜನಗರ (ಎಸ್‌ಸಿ ಮೀಸಲು) – ಎನ್.ಮಹೇಶ್ ಅಥವಾ ಹರ್ಷವರ್ದನ್‌
ಮಂಡ್ಯ; ಎನ್‌ಡಿಎ ಅಭ್ಯರ್ಥಿ (ಜೆಡಿಎಸ್‌)
ಬೆಂಗಳೂರು ಗ್ರಾಮಾಂತರ – ಸಿ.ಪಿ.ಯೋಗೇಶ್ವರ್ ಅಥವಾ ಡಾ. ಸಿ.ಎನ್.ಮಂಜುನಾಥ್
ಬೆಂಗಳೂರು ದಕ್ಷಿಣ – ಹಾಲಿ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರು ಕೇಂದ್ರ – ಹಾಲಿ ಸಂಸದ ಪಿ.ಸಿ.ಮೋಹನ್‌
ಬೆಂಗಳೂರು ಉತ್ತರ – ಹಾಲಿ ಸಂಸದ ಡಿ.ವಿ. ಸದಾನಂದಗೌಡ
ಕೋಲಾರ (ಎಸ್‌ಸಿ ಮೀಸಲು) – ಜೆಡಿಎಸ್‌ ಅಭ್ಯರ್ಥಿ
ಚಿಕ್ಕಬಳ್ಳಾಪುರ – ಎಂಟಿಬಿ ನಾಗರಾಜ್, ನಿತಿನ್ ಪುರುಷೋತ್ತಮ್, ಅಲೋಕ್ ಎಸ್.ಆರ್.ವಿಶ್ವನಾಥ್ ಅಥವಾ ಡಾ.ಕೆ.ಸುಧಾಕರ್
ತುಮಕೂರು – ಮಾಜಿ ಸಚಿವ ವಿ.ಸೋಮಣ್ಣ ಅಥವಾ ಜೆ.ಸಿ. ಮಾಧುಸ್ವಾಮಿ
ಹಾಸನ – ಜೆಡಿಎಸ್‌ ಅಭ್ಯರ್ಥಿ

 

Share Post