BengaluruPolitics

ಹಕ್ಕು ಚಲಾಯಿಸಿದ ಸಚಿವ ಆರ್‌.ಅಶೋಕ್‌; ಬೆಂಗಳೂರಲ್ಲಿ ಬಿರುಸಿನ ಮತದಾನ

ಬೆಂಗಳೂರು; ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ. ಎಲ್ಲಾ ಮತಗಟ್ಟೆಗಳಲ್ಲೂ ಜನ ಸಾಲುಗಟ್ಟಿ ನಿಂತಿದ್ದಾರೆ. ಎಲ್ಲರೂ ಸ್ವಯಂ ಪ್ರೇರಿತವಾಗಿ ಮತದಾನ ನಡೆಯುತ್ತಿದೆ. ರಾಜಕಾರಣಿಗಳು ಹಾಗೂ ಅಭ್ಯರ್ಥಿಗಳು ಕೂಡಾ ಮತದಾನ ಮಾಡುತ್ತಿದ್ದಾರೆ.

ಪತ್ನಿ ಪ್ರಮೀಳಾ ಅವರೊಂದಿಗೆ ಸೈಂಟ್ ಕ್ಲಾರೆಟ್ ಸ್ಕೂಲ್‌ ಮತಗಟ್ಟೆಯಲ್ಲಿ ಸಚಿವ ಆರ್.ಅಶೋಕ ಮತ ಚಲಾಯಿಸಿದರು. ಇದೇ ವೇಳೆ ಮಾತನಾಡಿರುವ ಅವರು, ತಾವು ಹಾಗೂ ಬಿಜೆಪಿ ಪಕ್ಷ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

Share Post