DistrictsPolitics

ಸಿಎಂ ಆಸೆ ಹೊರ ಹಾಕಿದ ಡಿ.ಕೆ.ಶಿವಕುಮಾರ್‌; ಚಾಮುಂಡಿ ಉತ್ಸವದಲ್ಲಿ ಹೇಳಿದ್ದೇನು..?

ರಾಮನಗರ; ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನದ ವಿಚಾರದಲ್ಲಿ ರಾಜಕೀಯ ಮೇಲಾಟ ಮುಂದುವರೆದಿದೆ. ಮೊನ್ನೆಯಷ್ಟೇ ಒಕ್ಕಲಿಗರ ಸಂಘದ ಸಮಾರಂಭದಲ್ಲಿ ಎಸ್‌.ಎಂ.ಕೃಷ್ಣ ನಂತರ ನನಗೆ ಅವಕಾಶ ಸಿಗುತ್ತಿದೆ. ಎಲ್ಲರೂ ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದ್ದರು. ಇದೀಗ, ರಾಮನಗರದಲ್ಲಿ ನಡೆದ ಚಾಮುಂಡೇಶ್ವರಿ ಉತ್ಸವದಲ್ಲೂ ಅವರು ಅದೇ ರೀತಿಯ ಹೇಳಿಕೆ ನೀಡಿದ್ದಾರೆ. ಹೆಚ್‌ಡಿಕೆಯವರಿಗೂ ಅವಕಾಶ ಕೊಟ್ಟಿದ್ದೀರಿ. ನನಗೂ ಒಂದು ಅವಕಾಶ ಕೊಡಿ ಎಂದು ಜನರಲ್ಲಿ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಚಾಮುಂಡೇಶ್ವರಿ ಉತ್ಸವದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌, ನನಗೆ ಹೂವಿನ ಹಾರ ಬೇಡ. ನಿಮ್ಮ ಆಶೀರ್ವಾದ ಬೇಕು. ಈ ಬಾರಿ ನನಗೆ ಅವಕಾಶ ಮಾಡಿಕೊಡಿ. ನಾನು ಯಾರನ್ನು ನಿಲ್ಲಿಸುತ್ತೇನೋ ಅವರನ್ನು ನೀವು ಗೆಲ್ಲಿಸಬೇಕು. ಆ ಮೂಲಕ ನನ್ನ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

Share Post