CrimePolitics

Breaking; ಕೊನೆಗೂ ಮೌನ ಮುರಿದ ಪ್ರಜ್ವಲ್‌ ರೇವಣ್ಣ; ಹಾಸನ ಸಂಸದನ ಫಸ್ಟ್‌ ರಿಯಾಕ್ಷನ್‌ ಇದು!

ಬೆಂಗಳೂರು; ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ, ಪ್ರಕರಣ ಸಂಬಂಧ ಫಸ್ಟ್‌ ರಿಯಾಕ್ಷನ್‌ ಕೊಟ್ಟಿದ್ದಾರೆ.. ಜರ್ಮನಿಯಲ್ಲಿರುವ ಪ್ರಜ್ವಲ್‌ ರೇವಣ್ಣ ಅವರು, ಇಂದು ಎಸ್‌ಐಟಿ ತನಿಖೆಗೆ ಹಾಜರಾಗಬೇಕಿತ್ತು.. ಆದ್ರೆ ವಿದೇಶದಲ್ಲಿರುವುದರಿಂದ ಬಂದಿಲ್ಲ.. ಹೀಗಿರುವಾಗಲೇ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫಸ್ಟ್‌ ರಿಯಾಕ್ಷನ್‌ ಕೊಟ್ಟಿದ್ದಾರೆ..

ʻವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ C.I.D ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆʼ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.. ಇದರ ಜೊತೆಗೆ ತನ್ನ ಪರವಾಗಿ ತಮ್ಮ ವಕೀಲರು ಎಸ್‌ಐಟಿ ಸಲ್ಲಿಸಿರುವ ಪತ್ರವನ್ನೂ ಲತ್ತಿಸಿದ್ದಾರೆ..

ನನ್ನ ವಕೀಲರ ಮೂಲಕ ಎಸ್‌ಐಟಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ.. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಪ್ರಜ್ವಲ್‌ ಹೇಳಿದ್ದಾರೆ.. ನಾಳೆ ರೇವಣ್ಣ ಅವರು ವಿಚಾರಣೆ ಹಾಜರಾಗುವ ಸಾಧ್ಯತೆ ಇದೆ.. ಇನ್ನು ಜರ್ಮನಿಯಲ್ಲಿರುವ ಪ್ರಜ್ವಲ್‌ ರೇವಣ್ಣ ಅವರು, ಮೇ 3ರಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ..

Share Post