Politics

ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ, ಯತೀಂದ್ರ ಸಿಡಿ ಬಿಡ್ತಾರೆ; ರಾಜೂಗೌಡ

ಸುರಪುರ; ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪೆನ್‌ಡ್ರೈವ್‌, ಸಿಡಿ ವಿಶ್ವವಿದ್ಯಾಲಯ ಓಪನ್‌ ಮಾಡಿದ್ದಾರೆ.. ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಅವರ ಮಗ ಯತೀಂದ್ರ ಮೇಲೂ ಇದೇ ಅಸ್ತ್ರ ಪ್ರಯೋಗಿಸುತ್ತಾರೆ ಎಂದು ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೂಗೌಡ ಗಂಭೀರ ಆರೋಪ ಮಾಡಿದ್ದಾರೆ..

ಸುರಪುರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ರಾಜೂಗೌಡ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.. ಪ್ರಚಾರದ ವೇಳೆ ಮಾತನಾಡಿರುವ ಅವರು, ಡಿ.ಕೆ.ಶಿವಕುಮಾರ್‌ ಅವರು ಎದುರಾಳಿಗಳನ್ನು ಬಗ್ಗುಬಡಿಯಲು ಬೆದರಿಕೆಯ ಅಸ್ತ್ರ ಉಪಯೋಗಿಸುತ್ತಾರೆ. ಕೆಲವರಿಗೆ ಸಿಡಿ ಅಸ್ತ್ರ ಕೂಡಾ ಉಪಯೋಗಿಸುತ್ತಾರೆ.. ರಮೇಶ್‌ ಜಾರಕಿಹೊಳಿ ವಿರುದ್ಧ ಇದೇ ಅಸ್ತ್ರ ಬಳಸಿದ್ದರು.. ಇದೀಗ ಪ್ರಜ್ವಲ್‌ ರೇವಣ್ಣ ವಿರುದ್ಧ ಪೆನ್‌ ಡ್ರೈವ್‌ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ..

ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಆಗಬೇಕಾಗಿದೆ.. ಇದಕ್ಕೂ ಅವರು ಸಿಡಿ ಅಸ್ತ್ರ ಪ್ರಯೋಗಿಸಬಹುದು.. ಯತೀಂದ್ರ ಅವರದ್ದು ಭ್ರಷ್ಟಾಚಾರ ಅಥವಾ ಬೇರಿನ್ಯಾವುದೋ ಸಿಡಿ ಬಿಡುತ್ತಾರೆ.. ಹೀಗಾಗಿ ಸಿದ್ದರಾಮಯ್ಯ ಅವರು ಎಚ್ಚೆತ್ತುಕೊಳ್ಳಬೇಕು.. ಅವರ ಜೊತೆ ಓಡಾಡಬಾರದು ಎಂದು ರಾಜೂಗೌಡ ಕಿವಿ ಮಾತು ಹೇಳಿದ್ದಾರೆ..

Share Post