Politics

DK Brothers; ಡಿಕೆ ಸಹೋದರರಿಗೆ ಬಿಜೆಪಿಯಿಂದ ಆಮಿಷ ಬಂದಿತ್ತಾ..?; ಡಿ.ಕೆ.ಸುರೇಶ್‌ ʻನಿರಂತರʼ ಉತ್ತರ!

ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಹೆಚ್ಚು ಸುದ್ದಿಯಾಗ್ತಿರೋದು ಕಾಂಗ್ರೆಸ್‌ನ ಏಕೈಕ ಸಂಸದ ಡಿ.ಕೆ.ಸುರೇಶ್‌ (d.k.suresh).. ಕೇಂದ್ರ ಬಜೆಟ್‌ ನಂತರ ಸಂಸದ ಡಿ.ಕೆ.ಸುರೇಶ್‌ ಅವರು, ರಾಜ್ಯಕ್ಕೆ ಅನುದಾನ ಕೊಟ್ಟಿಲ್ಲ. ಹೀಗೇ ಆದರೆ ನಾವು ಪ್ರತ್ಯೇಕ ದಕ್ಷಿಣ ಭಾರತ ದೇಶ ಕೇಳಬೇಕಾಗುತ್ತೆ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದರು. ಇದಾದ ಮೇಲೆ ಅವರು ಪ್ರತಿನಿಧಿಸುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ ವಿರುದ್ಧ ಯಾರು ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರ ಹೆಚ್ಚು ಚರ್ಚೆಯಲ್ಲಿದೆ.

ಇದನ್ನೂ ಓದಿ; Loksabha election; ಕರಾವಳಿಯ 3 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಬದಲು..?

ಬಿಜೆಪಿಯಿಂದ ಡಿಕೆ ಸಹೋದರರಿಗೆ ಆಮಿಷ ಬಂದಿತ್ತಾ..?;

ಬಿಜೆಪಿಯಿಂದ ಡಿಕೆ ಸಹೋದರರಿಗೆ ಆಮಿಷ ಬಂದಿತ್ತಾ..?; ಬಿಜೆಪಿ ನಾಯಕರು ಇತರೆ ಪಕ್ಷದ ನಾಯಕರಿಗೆ ಗಾಳ ಹಾಕಿ ಅವರನ್ನು ಸೆಳೆಯುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿರುತ್ತವೆ.. ಇನ್ನು ಯಾವುದಾದರೂ ಕೇಸ್‌ನಲ್ಲಿ ವಿಚಾರಣೆ ಎದುರಿಸುತ್ತಿದ್ದವರಿಗೆ ಬೆದರಿಸಿ ಪಕ್ಷಕ್ಕೆ ಕರೆದುಕೊಳ್ಳುತ್ತಾರೆ ಅಂತಾನೂ ಬಿಜೆಪಿ ವಿರುದ್ಧ ವಿಪಕ್ಷಗಳು ಆರೋಪ ಮಾಡಿದ್ದಿದೆ.. ಈ ನಡುವೆ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಡಿ.ಕೆ. ಸಹೋದರರಿಗೆ ಬಿಜೆಪಿಯಿಂದ ಆಹ್ವಾನ ಬಂದಿತ್ತು ಎಂಬ ಸುದ್ದಿಗಳು ಹರಿದಾಡಿದ್ದವು. ಅನಂತರ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ಸಿಗದಿದ್ದಾಗಲೂ ಆಮಿಷ ಬಂದಿತ್ತು ಎಂಬ ಸುದ್ದಿಗಳು ಹರಿದಾಡಿದ್ದವು.. ಈ ಬಗ್ಗೆ ಸಂಸದ ಡಿ.ಕೆ.ಸುರೇಶ್‌ ಅವರೇ ಈಗ ಮಾತನಾಡಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಆಂಕರ್‌, ತಮಗೇನಾದರೂ ಬಿಜೆಪಿಯಿಂದ ಆಮಿಷ ಬಂದಿತ್ತಾ ಎಂದು ಕೇಳುತ್ತಾರೆ.. ಅದಕ್ಕೆ ಡಿ.ಕೆ.ಸುರೇಶ್‌ ಕೊಟ್ಟ ಉತ್ತರ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಮುನ್ನಡಿ ಹಾಡಿದೆ.

ಇದನ್ನೂ ಓದಿ; DK Shivakumar; ಬೆಂಗಳೂರಿನ ನೀರಿನ ಸಮಸ್ಯೆ ನೀಗಿಸಲು ಕ್ರಮ; ಡಿಕೆಶಿ

ಅದು ನಿರಂತರ ಎಂದ ಸಂಸದ ಡಿ.ಕೆ.ಸುರೇಶ್‌..!;

ಅದು ನಿರಂತರ ಎಂದ ಸಂಸದ ಡಿ.ಕೆ.ಸುರೇಶ್‌..!; ಖಾಸಗಿ ಚಾನಲ್‌ ವರದಿಗಾರ ಡಿ.ಕೆ.ಸುರೇಶ್‌ ಜೊತೆ ಮಾತನಾಡುತ್ತಾ, ಡಿಕೆ ಸಹೋದರರಿಗೆ ಬಿಜೆಪಿ ಆಹ್ವಾನ ಬಂದಿತ್ತಾ ಎಂದು ಪ್ರಶ್ನೆ ಮಾಡುತ್ತಾರೆ.. ಅದಕ್ಕೆ ಡಿ.ಕೆ.ಸುರೇಶ್‌, ಅದು ನನಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ಆಗ ಆ ವರದಿಗಾರ, ಬಿಜೆಪಿಯವರು ಬೆದರಿಕೆ ಹಾಕುವುದು, ಆಮಿಷ ಕೊಡೋದು ಮಾಡ್ತಾರೆ ಅಂತ ನೀವೇ ಆರೋಪ ಮಾಡಿದ್ದೀರಿ. ಹೀಗಾಗಿ ನಿಮಗೂ ಏನಾದರೂ ಆಮಿಷ ಬಂದಿತ್ತಾ ಎಂದು ಮರು ಪ್ರಶ್ನೆ ಹಾಕುತ್ತಾರೆ… ಆಗ ಡಿ.ಕೆ.ಸುರೇಶ್‌ ಅವರು ಅದು ನಿರಂತರ ಎಂದಷ್ಟೇ ಉತ್ತರ ಕೊಡ್ತಾರೆ…

ಇದನ್ನೂ ಓದಿ; Fasting; ಉಪವಾಸ ಮಾಡಿದರೆ ತೂಕ ಕಡಿಮೆಯಾಗುತ್ತಾ..?; ನಿಜಕ್ಕೂ ಏನಾಗುತ್ತೆ..?

ಡಿಕೆ ಸಹೋದರರಿಗೆ ನಿರಂತರ ಆಮಿಷವಿದೆಯಾ..?;

ಡಿಕೆ ಸಹೋದರರಿಗೆ ನಿರಂತರ ಆಮಿಷವಿದೆಯಾ..?; ಮಾಜಿ ಸಿಎಂ ಕುಮಾರಸ್ವಾಮಿಯವರು ಬಿಜೆಪಿಯವರ ಜೊತೆ ಸೇರಿಕೊಂಡು ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್‌ ಅವರನ್ನು ಸೋಲಿಸಲು ರಣತಂತ್ರ ನಡೆಸುತ್ತಿದ್ದಾರೆ… ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ದೇವೇಗೌಡರ ಅಳಿಯ ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಕಣಕ್ಕಿಳಿಸೋ ಪ್ರಯತ್ನ ನಡೆಯುತ್ತಿದೆ.. ಇಂತಹ ಸಮಯದಲ್ಲಿ ಖಾಸಗಿ ವಾಹಿನಿ ಡಿ.ಕೆ.ಸುರೇಶ್‌ ಸಂದರ್ಶನ ಮಾಡಿದ್ದು, ಇದರಲ್ಲಿ ಆಮಿಷದ ಬಗ್ಗೆ ಮಾತನಾಡಿದ್ದಾರೆ. ಆಮಿಷಗಳು ನಿರಂತರವಾಗಿರುತ್ತವೆ ಎಂದು ಹೇಳಿದ್ದಾರೆ. ಹಾಗಾದರೆ ಡಿ.ಕೆ.ಸುರೇಶ್‌ ಹೇಳಿದಂತೆ ಬಿಜೆಪಿಯಿಂದ ಡಿಕೆ ಸಹೋದರರಿಗೆ ಆಮಿಷ ಬರುತ್ತಿದೆಯಾ..? ಇದಕ್ಕೆ ಬಿಜೆಪಿ ನಾಯಕರೇ ಉತ್ತರ ಕೊಡಬೇಕು.

Share Post