Politics

ಬಿಜೆಪಿ ತೊರೆದ ಶಾಸಕನಿಗೆ ಬಂಧನದ ವಾರಂಟ್‌..!

ಲಖನೌ: ಯೋಗಿ ಆದಿತ್ಯನಾಥ್‌ ಸರ್ಕಾರದಲ್ಲಿ ಕಾರ್ಮಿಕ ಸಚಿವನಾಗಿದ್ದ ಸ್ವಾಮಿ ಪ್ರಸಾದ್‌ ಅವರಿಗೆ ಬಿಜೆಪಿ ತೊರೆದ ೨೪ ಗಂಟೆಗಳಲ್ಲಿ ಬಂಧನದ ಭೀತಿ ಶುರುವಾಗಿದೆ. ಸುಲ್ತಾನ್‌ ಪುರ ನ್ಯಾಯಾಲಯ ಅವರಿಗೆ ಬಂಧನದ ವಾರಂಟ್‌ ಹೊರಡಿಸಿದೆ.
೨೦೧೪ರಲ್ಲಿ ಸ್ವಾಮಿ ಪ್ರಸಾದ್‌ ಅವರು ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿ ಮಾತನಾಡಿದ್ದರು. ದ್ವೇಷ ಭಾಷಣ ಮಾಡಿದ್ದರ ಆರೋಪದ ಮೇಲೆ ಅವರ ವಿರುದ್ಧ ಕೇಸ್‌ ದಾಖಲಾಗಿತ್ತು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್‌, ನಿನ್ನೆಯಷ್ಟೇ ಬಿಜೆಪಿ ತೊರದು, ಸಮಾಜವಾದಿ ಪಾರ್ಟಿಗೆ ವಾಪಸ್ಸಾಗಿದ್ದಾರೆ. ಈ ಬೆನ್ನಲ್ಲೇ ಅವರಿಗೆ ಬಂಧನದ ಭೀತಿ ಶುರುವಾಗಿದೆ.

Share Post