Politics

ಬಿಜೆಪಿಯವರದ್ದು ದುಡ್ಡೇ ದೊಡ್ಡಪ್ಪ ಎನ್ನುವ ಮನೋಭಾವ:ಡಿಕೆಶಿ

ಬೆಂಗಳೂರು: ಪರಿಷತ್‌ ಚುನಾವಣೆ ಫಲಿತಾಂಶದ ಬಗ್ಗೆ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ ಪಕ್ಷ ಒಗ್ಗಟ್ಟಾಗಿ ಪರಿಷತ್‌ ಚುನಾವಣೆಯನ್ನು ಎದುರಿಸಿದ್ದೇವೆ. ಈ ಬಾರಿ ಮತದಾರರು ಬದಲಾವಣೆಯನ್ನು ತೋರಿಸಿದ್ದಾರೆ. ಈ ಮೊದಲು ಬಿಜೆಪಿ ಗೆದ್ದಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ವಿಜಯ ಪತಾಕೆಯನ್ನು ಹಾರಿಸಿದೆ. ಹಾಗೆಯೇ ನಾವು ಗೆದ್ದಂತಹ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ಒಂದು ಖುಷಿ ಕೊಡುವ ವಿಷಯ ಅಂದ್ರೆ ಆಡಳಿತ ಪಕ್ಷಕ್ಕೆ ಪೈಪೋಟಿ ಕೊಡುವಷ್ಟು ಸನಿಹಕ್ಕೆ ಬಂದಿದ್ದೇವೆ. ಬಿಜೆಪಿಯವರು ದುಡ್ಡೇ ದೊಡ್ಡಪ್ಪ ಅನ್ನುವಂತಹ ಮನಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅದ್ರೆ ಜನರ ಸೇವೆ, ಬಡತನ ನಿರ್ಮೂಲನೆ, ಅಭಿವೃದ್ಧಿ ಕಾಂಗ್ರೆಸ್‌ನ ಮೂಲ ಮಂತ್ರವಾಗಿದೆ ಎಂಬ ಮಾತನ್ನು ಡಿಕೆಶಿ ಹೇಳಿದ್ದಾರೆ.

Share Post