DistrictsPolitics

ಭಾರತ್‌ ಜೋಡೋ ಯಾತ್ರೆ; ಪೇಸಿಎಂ ಟೀ ಶರ್ಟ್‌ ಧರಿಸಿದ್ದ ಯುವಕ ಅರೆಸ್ಟ್‌

ಚಾಮರಾಜನಗರ; ಭಾರತ್ ಜೋಡೋ ಯಾತ್ರೆಯಲ್ಲಿ ಪೇಸಿಎಂ‌ ಎಂದು ಟೀ ಶರ್ಟ್ ಮತ್ತು ಧ್ವಜ ಹಿಡಿದು ಓಡಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿ, ಸ್ಟೇಷನ್‌ ಬೇಲ್‌ ಮೇಲೆ ಬಿಡುಗಡೆ ಮಾಡಿದ್ದಾರೆ.

ಯಾತ್ರೆ ವೇಳೆ ಯುವಕನನ್ನು ಹಿಡಿದ ಪೊಲೀಸರು ನಡುರಸ್ತೆಯಲ್ಲೇ ಟೀ ಶರ್ಟ್ ಬಿಚ್ಚಿಸಿದ್ದಾರೆ. ಟೀ ಶರ್ಟ್ ಬಿಚ್ಚುತ್ತಿರುವಾಗ ಪೊಲೀಸ್ ಸಿಬ್ಬಂದಿ ಒಬ್ಬರು ಆತನ ತಲೆಗೆ, ಬೆನ್ನಿಗೆ ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯವರಾದ ಅಕ್ಷಯ್‌ ಕುಮಾರ್‌ ಅವರು ಶುಕ್ರವಾರ ಗುಂಡ್ಲುಪೇಟೆಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಅವರು ಧರಿಸಿದ್ದ ಟೀಶರ್ಟ್‌ ಹಾಗೂ ಧ್ವಜ ಜನರ ಗಮನ ಸೆಳೆದಿತ್ತು.

ಅಕ್ಷಯ್ ವಿರುದ್ಧ ಗುಂಡ್ಲುಪೇಟೆಯ ಜಿ.ಎಸ್‌.ಕಿರಣ್‌ ಎಂಬುವವರು ಶುಕ್ರವಾರ ಚಾಮರಾಜನಗರ ಸಿಇಎನ್‌ ಅಪರಾಧ ಠಾಣೆಗೆ ದೂರು ನೀಡಿದ್ದರು.

ಅದರ ಆಧಾರದಲ್ಲಿ ಶನಿವಾರ ಅಕ್ಷಯ್‌ ಅವರು ಬೇಗೂರಿನಿಂದ ಮೈಸೂರಿನತ್ತ ಪಾದಯಾತ್ರೆಯಲ್ಲಿ ತೆರಳುತ್ತಿದ್ದಾಗ ಪೊಲೀಸರು ಅವರನ್ನು ತಡೆದು, ಟೀಶರ್ಟ್‌ ತೆಗೆಸಿ ವಶಕ್ಕೆ ಪಡೆದಿದ್ದರು. ಠಾಣೆ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Share Post