CrimeNational

ಗಂಟಲಿನಲ್ಲಿ ಕೊಬ್ಬರಿ ತುಂಡು ಸಿಕ್ಕಿಹಾಕಿಕೊಂಡು ಮೂರುವರೆ ವರ್ಷದ ಮಗು ಸಾವು

ತಮಿಳುನಾಡು: ಪುಟ್ಟ ಮಕ್ಕಳನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಂಡರೂ ಸಾಲದು. ಪೋಷಕರ ನಿರ್ಲಕ್ಷ್ಯದಿಂದಲೋ ಅಥವಾ ಯಾವುದೋ ಕೆಲಸದಲ್ಲಿ ನಿರತರಾಗಿ ಮಕ್ಕಳ ಮೇಲಿನ ಗಮನ ಕಳೆದು ಹೋಗಿರುತ್ತದೆ. ಆ ವೇಳೆ ಪುಟ್ಟ ಮಕ್ಕಳು ಮಾಡಿಕೊಳ್ಳುವ ಕೆಲಸ ಒಂದೊಂದಲ್ಲ..ಎಷ್ಟೋ ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಮೂರೂವರೆ ವರ್ಷದ ಮಗುವಿನ ಗಂಟಲಲ್ಲಿ ಕೊಬ್ಬರಿ ತುಂಡೊಂದು ಸಿಕ್ಕಿಹಾಕಿಕೊಂಡು ಮಗು ಸಾವನ್ನಪ್ಪಿರುವ ದಾರುಣ ಘಟನೆ  ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಮಗುವಿನ ಸಾವು ಕುಟುಂಬಸ್ಥರಲ್ಲಿ ನೋವನ್ನುಂಟುಮಾಡಿದೆ. ವಸಂತ್ ಅವರ ಪುತ್ರ ಸಂಜೀಶ್ವರನ್ ಎಂದು ಗುರುತಿಸಲಾಗಿದೆ.

ಕುಟುಂಬಸ್ಥರು ಅಡುಗೆಯಲ್ಲಿ ನಿರತರಾಗಿರಾಗಿದ್ದಾರೆ. ಈ ವೇಳೆ ಸಾಂಬಾರ್‌ಗೆ ಹೆಚ್ಚಿಟ್ಟಿದ್ದ ತೆಂಗಿನಕಾಯಿಯನ್ನು ಮಗು ತಿಂದಿದೆ.  ಇದ್ದಕ್ಕಿದ್ದಂತೆ ಗಂಟಲು ಕಟ್ಟಿಕೊಂಡು ಅಳಲಾರಂಭಿಸಿದೆ. ಯಾಕೆಂದು ತಿಳಿಯದೆ ಪೋಷಕರು ಗೊಂದಲದಲ್ಲಿ ಮಗುವನ್ನು ಸಮಾಧಾನ ಪಡಿಸುವ ಕೆಲಸ ಮಾಡಿದ್ದಾರೆ. ಅತ್ತು ಅತ್ತು ಮಗು ಒಮ್ಮೆಲೆ ಕುಸಿದುಬಿದ್ದಿದೆ.  ತದನಂತರ ಕೊಬ್ಬರಿ ತುಂಡು ಗಂಟಲಿನಲ್ಲಿರುವುದನ್ನು ಗಮನಿಸಿದ ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.   ತಿರುವಳ್ಳೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಪೋಷಕರ ನಿರ್ಲಕ್ಷ್ಯದಿಂದ ಮುಗ್ದ ಮಗು ಅಸುನೀಗಿದೆ. ಪುತ್ರನನ್ನು ಕಳೆದುಕೊಂಡು ಇದೀಗ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮನೆಯಲ್ಲಿ ನೀರವ ಮೌನ ಆವರಿಸಿದೆ.

Share Post