BengaluruPolitics

ಬಾಸ್‌..ಬಾಸ್‌.. ಅಂತಿದ್ದರು, ಯಾರು ಬಾಸ್‌ ನನಗೆ ಗೊತ್ತಿಲ್ಲ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ದರ್ಶನ್‌ ಪತ್ನಿ ವಿಜಯಲಕ್ಷ್ಮೀ ನನ್ನನ್ನು ಭೇಟಿಯಾಗಿದ್ದರು.. ಆದ್ರೆ ದರ್ಶನ್‌ ಕೇಸ್‌ ಬಗ್ಗೆ ಯಾವುದೇ ಪ್ರಸ್ತಾಪ ಆಗಲಿಲ್ಲ.. ಅವರ ಮಗನಿಗೆ ಶಾಲೆಯಲ್ಲಿ ಸೀಟು ಕೇಳಿಕೊಂಡು ಬಂದಿದ್ದರು.. ನಾನು ಪ್ರಾಂಶುಪಾಲರಿಗೆ ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿರುವ ಡಿ.ಕೆ.ಶಿವಕುಮಾರ್‌, ದರ್ಶನ್‌ ಈ ಹಿಂದೆ ತಮ್ಮ ಮಗನಿಗೆ ಶಾಲೆಯ ಸೀಟ್‌ ಕೇಳಿದ್ದರು, ಆಗ ಕೊಡಿಸಿದ್ದೆ.. ಈಗ ವಿಜಯಲಕ್ಷ್ಮೀಯವರು ಮತ್ತೆ ಮನೆಗೆ ಹತ್ತಿರವಿರುವ ಶಾಲೆಯಲ್ಲಿ ಸೀಟು ಕೊಡುವಂತೆ ಕೇಳಿದ್ದಾರೆ. ಮಕ್ಕಳ ವಿಚಾರ ಮುಖ್ಯವಾಗುತ್ತದೆ. ಹೀಗಾಗಿ ಆ ಮಗುವಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ..

ಇದನ್ನೂ ಓದಿ; ಕಪ್ಪು ಅರಿಶಿಣ ನೋಡಿದ್ದೀರಾ..?; ಇದನ್ನು ಬಳಸುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ..?

ವಿಜಯಲಕ್ಷ್ಮೀಯವರು ದರ್ಶನ್‌ ವಿಚಾರ ಮಾತನಾಡಲು ಬರುತ್ತಿದ್ದಾರೆ ಎಂದುಕೊಂಡಿದ್ದೆ. ನಿನ್ನೆಯೇ ನನ್ನನ್ನು ಭೇಟಿಯಾಗಲು ಬಂದಿದ್ದರು.. ಆದ್ರೆ ನಾನು ನಿರಾಕರಿಸಿ ಇಂದು ಮನೆಯ ಬಳಿಗೆ ಬರುವಂತೆ ಸೂಚಿಸಿದ್ದೆ.. ಹೀಗಾಗಿ ಇಂದು ಬಂದಿದ್ದರು.. ಅವರು ದರ್ಶನ್‌ ವಿಚಾರ ಏನೂ ಮಾತನಾಡಲಿಲ್ಲ.. ಜೊತೆಗೆ ಆ ಪ್ರಕರಣ ನನ್ನ ವ್ಯಾಪ್ತಿಗೆ ಬರೋದಿಲ್ಲ.. ಯಾಕಂದ್ರೆ ನಾನು ಗೃಹಸಚಿವನೂ ಅಲ್ಲ.. ಪ್ರಕರಣದ ವಿಚಾರ ಕಾನೂನಿನಡಿಯಲ್ಲಿ ನಡೆಯುತ್ತದೆ.. ಅದ್ರಲ್ಲಿ ನಾನು ಮಧ್ಯಪ್ರವೇಶ ಮಾಡೋದಿಲ್ಲ.. ಆದ್ರೆ ಶಾಲೆ ಸೀಟು ಕೇಳಿದ್ದಾರೆ, ಅದಕ್ಕೆ ನಾನು ಸಹಕರಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ..

ಇದನ್ನೂ ಓದಿ; Breaking; ಟೇಕಾಫ್‌ ವೇಳೆ ವಿಮಾನ ಪತನ; 19 ಮಂದಿ ದುರ್ಮರಣ!

ನಿನ್ನೆ ನನ್ನ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದಷ್ಟು ಯುವಕರು ಬಾಸ್‌ ಬಾಸ್‌ ಎಂದು ಕೂಗುತ್ತಿದ್ದರು.. ಯಾರು ಬಾಸ್‌ ಅಂತ ನನಗೆ ಗೊತ್ತಾಗಲಿಲ್ಲ.. ಮತ್ತೆ ನೋಡಿದರೆ ದರ್ಶನ್‌ ಫೋಟೋ ಹಿಡಿದುಕೊಂಡಿದ್ದರು.. ನೋಡೋಣ ಪರಿಶೀಲನೆ ಮಾಡುತ್ತೇನೆ ಎಂದು ಅವರಿಗೆ ಸಮಾಧಾನ ಮಾಡಿದೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಹೇಳಿದರು..

Share Post