Bengaluru

BJP ಶಾಸಕರು ಕಾಂಗ್ರೆಸ್‌ ಸಂಪರ್ಕದಲ್ಲಿರುವ ವಿಚಾರ ಶುದ್ಧ ಸುಳ್ಳು:ಸಿಎಂ

ಬೆಂಗಳೂರು: ಬಿಜೆಪಿ ಶಾಸಕರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿಯವರು ಈ ಸುದ್ದಿ ಶುದ್ಧ ಸುಳ್ಳು ಎಂದಿದ್ದಾರೆ. ಕಾಂಗ್ರೆಸ್‌ ನಾಯಕರು ನೀಡುತ್ತಿರುವ ಹೇಳಿಕೆ ಆಶ್ಚರ್ಯಕರವಾಗಿದೆ. ಈ ನಡುವೆ ರಮೇಶ್‌ ಜಾರಕಿಹೊಳಿ ಕೂಡ ಕಾಂಗ್ರೆಸ್‌ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ ಈ ಬಗ್ಗೆ ನನಗೂ ಗೊತ್ತಿಲ್ಲ. ಅವರ ಜೊತೆ ಯಾರೆಲ್ಲಾ ಇದಾರೆ ಎಂದು ವಿಚಾರಣೆ ಮಾಡುವೆ ಎಂದಿದ್ದಾರೆ.

ಇನ್ನೂ ಸಿದ್ದರಾಮಯ್ಯ ಮೂರು ದಿನಗಳಿಂದ ಬಿಜೆಪಿ ಶಾಸಕರು ನನ್ನ ಜೊತೆಯಿದ್ದಾರೆ ಅಂತಿದಾರೆ. ಇಂದು ನೋಡಿದ್ರೆ ಚುನಾವಣೆ ಸಂದರ್ಭದಲ್ಲಿ ಬರ್ತಾರೆ ಅಂತಿದಾರೆ. ಈ ದ್ವಂದ್ವ ಹೇಳಿಕೆಯಿಂದಲೇ ತಿಳಿಯುತ್ತದೆ ಸಿದ್ದರಾಮಯ್ಯ ಹೇಳುತ್ತಿರುವುದು ಸುಳ್ಳು, ಸಿದ್ದರಾಮಯ್ಯ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ. ಹಾಗೆಯೇ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಆಂತರಿಕ ಸಂಘರ್ಷವಿದೆ. ಶಾಸಕರು ನನ್ನ ಸಂಪರ್ದಲ್ಲಿದ್ದಾರೆ ಅಂತ ಡಿಕೆಶಿ ಹೇಳುತ್ತಾರೆ, ನನ್ನ ಸಂಪರ್ಕದಲ್ಲಿದ್ದಾರೆಂದು ಸಿದ್ದರಾಮಯ್ಯ ಕೂಡ ಹೇಳ್ತಿದಾರೆ. ಇವರಿಬ್ಬರ ನಡುವೆಯೇ ಒಗ್ಗಟ್ಟಿಲ್ಲ ಆಂತರಿಕ ಸಂಘರ್ಷ ಇದೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ತಿಳಿಸಿದ್ರು.

ಇದರ ಸಿಎಂ ಬದಲಾವಣೆ ಆಗ್ತಾರೆ ಎಂಬ ಸುದ್ದಿ ಹರಿದಾಡ್ತಿದೆ ಇದೆಲ್ಲಾ ಶುದ್ದ ಸುಳ್ಳು. ಇಂತಹ ಮಾತುಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ.

Share Post